Advertisement

ಬಳ್ಳಾರಿ ಪಾಲಿಕೆ ನೂತನ ಆಯುಕ್ತರಾಗಿ ಪ್ರೀತಿ ಗೆಹ್ಲೋಟ್ ನಿಯೋಜನೆ

09:18 AM Nov 13, 2020 | keerthan |

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರನ್ನು ನಿಯೋಜಿಸಿ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

Advertisement

ಭ್ರಷ್ಟಾಚಾರದ ಆರೋಪದ ಕಾರಣದಿಂದ ಈ ಹಿಂದಿನ ಆಯುಕ್ತೆ ಎಂ.ವಿ.ತುಷಾರಮಣಿ ಅವರು ಅಮಾನತಾಗಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ 2016ರ ಬ್ಯಾಚ್ ನ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದೀಗ ಮಹಾನಗರ ಪಾಲಿಕೆ ಆಯುಕ್ತೆಯಾಗಿ ನೇಮಕಗೊಂಡ ಪ್ರೀತಿ ಗೆಹ್ಲೋಟ್ ಅವರು, ಎರಡನೇಯ ಮಹಿಳಾ ಆಯುಕ್ತೆಯಾಗಿ ನೇಮಕ ಗೊಂಡಿರುವುದು ವಿಶೇಷವೆನಿಸಿದೆ.

ಇದನ್ನೂ ಓದಿ:ಬಳ್ಳಾರಿಯಿಂದ ಬಂದು ‘ಹಾಯ್ ಬೆಂಗಳೂರು’ ಎಂದಾತ;ಕಪ್ಪು ಸುಂದರಿಯ ರೂವಾರಿ ಅಕ್ಷರ ಲೋಕದ ಮಾಂತ್ರಿಕ

ಪ್ರೀತಿ ಗೆಹ್ಲೋಟ್ ಅವರು ಈ ಮೊದಲು ಕಲ್ಬುರ್ಗಿಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು.

Advertisement

ಬೆಂಗಳೂರು, ಬೆಳಗಾವಿ ಹೊರತುಪಡಿಸಿದರೆ ರಾಜ್ಯದ ಇತರೆ ಮಹಾನಗರ ಪಾಲಿಕೆಗೆ ಒಬ್ಬ ಐಎಎಸ್ ದರ್ಜೆಯ ಅಧಿಕಾರಿ ಒಬ್ಬರನ್ನು ಆಯುಕ್ತರನ್ನಾಗಿ ನೇಮಿಸುವುದು ಇದೆ ಮೊದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next