Advertisement

ಪ್ರಯಾಗ್‌ರಾಜ್‌: ರಾಮ ನಾಮ ಬ್ಯಾಂಕ್‌!

12:30 AM Jan 22, 2019 | |

ಅಲಹಾಬಾದ್‌: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ವಿನೂತನ ಬ್ಯಾಂಕ್‌ವೊಂದು ಕಾರ್ಯನಿರ್ವಹಿಸುತ್ತಿದೆ. ಅದರ ಹೆಸರು ‘ರಾಮ ನಾಮ ಬ್ಯಾಂಕ್‌’!

Advertisement

ಈ ಬ್ಯಾಂಕ್‌ನಲ್ಲಿ ಹಣ, ಎಟಿಎಂ, ಚೆಕ್‌ ಬುಕ್‌ನ ಸುದ್ದಿಯೇ ಇರಲ್ಲ. ಏಕೆಂದರೆ, ಇಲ್ಲಿ ಹಣಕಾಸಿನ ವ್ಯವಹಾರವೇ ನಡೆಯುವುದಿಲ್ಲ. ಇಲ್ಲಿ ನಡೆಯುವುದು ಆಧ್ಯಾತ್ಮಿಕ ವ್ಯವಹಾರ. ಅಂದರೆ, ಮನಶಾÏಂತಿ ಹಾಗೂ ನೆಮ್ಮದಿಗಾಗಿ ಜನ ಈ ಬ್ಯಾಂಕ್‌ನಲ್ಲಿ ಖಾತೆ ತೆರೆಯುತ್ತಿದ್ದಾರೆ. ಇಲ್ಲಿ ಚಲಾವಣೆಯಾಗುವ ಏಕೈಕ ಕರೆನ್ಸಿಯೆಂದರೆ, ‘ಭಗವಾನ್‌ ಶ್ರೀರಾಮ.’

ಹೌದು, 20ನೇ ಶತಮಾನದ ಆರಂಭದಲ್ಲಿ ಈಶ್ವರ್‌ ಚಂದ್ರ ಎಂಬವರು ಆರಂಭಿಸಿದ್ದ ಬ್ಯಾಂಕ್‌ ಅನ್ನು ಈಗ ಅವರ ಮೊಮ್ಮಗ ಅಶುತೋಷ್‌ ನಿರ್ವಹಿಸುತ್ತಿದ್ದಾರೆ. ಒಂಬತ್ತು ದಶಕಗಳಿಂದ ಈ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ವಿವಿಧ ಧರ್ಮ ಹಾಗೂ ವಯೋಮಿತಿಯ ಸುಮಾರು ಒಂದು ಲಕ್ಷ ಖಾತೆದಾರರಿದ್ದಾರೆ.

ಕಾರ್ಯನಿರ್ವಹಣೆ ಹೇಗೆ?:
ಖಾತೆದಾರರಿಗೆ 108 ಕಾಲಂಗಳಿರುವ 30 ಪುಟಗಳ ಪುಸ್ತಿಕೆಯೊಂದನ್ನು ನೀಡಲಾಗುತ್ತದೆ. ಅದರಲ್ಲಿ ಅವರು ಪ್ರತಿ ದಿನ 108 ಬಾರಿ ‘ರಾಮ ನಾಮ’ವನ್ನು ಬರೆಯಬೇಕು. ಈ ಪುಸ್ತಿಕೆಯನ್ನು ಆಯಾ ಸದಸ್ಯನ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ಇತರೆ ಬ್ಯಾಂಕ್‌ಗಳಂತೆ ಪಾಸ್‌ಬುಕ್‌ಗಳನ್ನೂ ವಿತರಿಸಲಾಗುತ್ತದೆ. ಖಾತೆಯ ಪ್ರಮಾಣವು ರಾಮ ನಾಮದ ಸಂಖ್ಯೆಗಳನ್ನು ಆಧರಿಸಿರುತ್ತದೆ. ಇದನ್ನು ಲಿಖೀತ ಜಪ ಎಂದು ಹೇಳಲಾಗುತ್ತದೆ. ರಾಮ ನಾಮವನ್ನು ಬರೆಯುತ್ತಾ, ಬರೆಯುತ್ತಾ ಆ ವ್ಯಕ್ತಿಯು ಮನಶಾÏಂತಿಯನ್ನು ಗಳಿಸುವನು ಎನ್ನುತ್ತಾರೆ ಬ್ಯಾಂಕ್‌ ಮ್ಯಾನೇಜರ್‌ ಅಶುತೋಷ್‌.

ಈ ಬ್ಯಾಂಕ್‌19 ಕೋಟಿಗೂ ಅಧಿಕ ರಾಮನಾಮ ಡೆಪಾಸಿಟ್ಹೊಂದಿದೆ. ಇದರಲ್ಲಿ ಭಾರತೀಯರು ಮಾತ್ರವಲ್ಲದೆ ಅನಿವಾಸಿ ಭಾರತೀಯರು ಕೂಡ ಖಾತೆ ಹೊಂದಿದ್ದಾರೆ. ರಾಮನಾಮ ಬರೆಯುವಾಗ ಮಾಂಸಾಹಾರ, ನೀರುಳ್ಳಿ, ಬೆಳ್ಳುಳ್ಳಿ ವರ್ಜಿಸುವಂತಹ ಶರತ್ತುಗಳಿರುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next