Advertisement

ಗೌಡರ ಕುಟುಂಬ ಗೆಲ್ಲಲು “ಕೈ’ನಾಯಕರ ಪ್ರಾರ್ಥನೆ

11:27 PM Apr 14, 2019 | Team Udayavani |

ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕರಿಗೆ ಈಗ ಮತ್ತೂಂದು ಸಮಸ್ಯೆ ಎದುರಾಗಿದೆ. ಈ ಹಿಂದೆ ದೇವೇಗೌಡರ ಕುಟುಂಬ ರಾಜಕಾರಣವನ್ನು ಸದಾ ವಿರೋಧಿಸುತ್ತಾ ಬಂದಿದ್ದ ಕಾಂಗ್ರೆಸ್‌ ನಾಯಕರಿಗೆ, ಈಗ ಅದೇ ಕುಟುಂಬ ರಾಜಕಾರಣವನ್ನು ಓಲೈಸುವ ಸ್ಥಿತಿ ಎದುರಾಗಿದೆ.

Advertisement

ಕಾರಣ, ಈ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದವರು ಸೋತರೆ ಸಮ್ಮಿಶ್ರ ಸರ್ಕಾರದ ಭವಿಷ್ಯಕ್ಕೆ ಧಕ್ಕೆಯಾಗಬಹುದು. ದೇವೇಗೌಡ ಹಾಗೂ ಸಿಎಂ ಮುನಿಸಿಕೊಳ್ಳಬಹುದು ಎಂಬ ಆತಂಕ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆಯಂತೆ. ಹೀಗಾಗಿ, ಏನಾದರಾಗಲಿ, ದೇವೇಗೌಡ, ನಿಖಿಲ್‌, ಪ್ರಜ್ವಲ್‌ ಗೆಲ್ಲಲಿ ಎಂದು ಕಾಂಗ್ರೆಸ್‌ ನಾಯಕರು ದೇವರನ್ನು ಪ್ರಾರ್ಥಿಸುತ್ತಿದ್ದಾರಂತೆ.

ಮಂಡ್ಯದಲ್ಲಿ ಸ್ಥಳೀಯ ಕಾಂಗ್ರೆಸ್‌ ನಾಯಕರು ಸುಮಲತಾರನ್ನು ಬೆಂಬಲಿಸಲು ಸಿದ್ದರಾಮಯ್ಯ ಅವರ ಪರೋಕ್ಷ ಬೆಂಬಲವಿದೆ ಎಂಬುದು ಸಿಎಂ ಕುಮಾರಸ್ವಾಮಿ ಗುಮಾನಿ. ಹಾಗಾಗಿಯೇ, ಅವರು ಮಂಡ್ಯದಲ್ಲಿ ನಿಖಿಲ್‌ರನ್ನು ಸೋಲಿಸಲು ಚಕ್ರವ್ಯೂಹ ರಚನೆಯಾಗಿದೆ ಎಂದು ಹೇಳಿಕೆ ನೀಡುತ್ತಾ, ಮನದ ದುಗುಡವನ್ನು ಹೊರಹಾಕುತ್ತಿದ್ದಾರೆ.

ಇನ್ನು, ಹಾಸನದಲ್ಲಿ ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿರುವ ಮಂಜು ಕೂಡ ಸಿದ್ದರಾಮಯ್ಯನವರ ಬೆಂಬಲಿಗ ಎಂಬುದು ರೇವಣ್ಣ ಅವರ ಆತಂಕ. ಹಾಗಾಗಿ, ನಿಖಿಲ್‌, ಪ್ರಜ್ವಲ್‌ ಸೋತರೆ ಅದರ ಹೊಣೆ ಪರೋಕ್ಷವಾಗಿ ಸಿದ್ದು ಹೆಗಲಿಗೆ. ಪರಿಣಾಮ ಮೈತ್ರಿ ಸರ್ಕಾರದಲ್ಲಿ ಬಿರುಕಿಗೆ ಕಾರಣವಾಗಲಿದೆ ಎಂಬುದು “ಕೈ’ ನಾಯಕರ ಆತಂಕ.

Advertisement

Udayavani is now on Telegram. Click here to join our channel and stay updated with the latest news.

Next