Advertisement

ಪ್ರಸಾದ್‌ ರಾಜಕೀಯ ವ್ಯಭಿಚಾರಿ

12:29 PM Apr 07, 2017 | |

ಮೈಸೂರು: ನಂಜನಗೂಡು ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ ಮತಚಲಾಯಿಸುವಂತೆ ಪ್ರಚಾರ ನಡೆಸುತ್ತಿರುವ ಯಡಿಯೂರಪ್ಪ, ಈ ಮೂಲಕ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್‌ ಅವರು ಅಸಮರ್ಥ ಅಭ್ಯರ್ಥಿ ಎಂಬುದನ್ನು ಸಾಬೀತುಪಡಿಸಿ ದ್ದಾರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಟೀಕಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಪರವಾಗಿ ಯಡಿಯೂರಪ್ಪನಿರಂತರವಾಗಿ ಪ್ರಚಾರ ನಡೆಸುತ್ತಿದ್ದು, ಆ ಮೂಲಕ ಶ್ರೀನಿವಾಸ ಪ್ರಸಾದ್‌ ಅವರಿಗೆ ಮತ ಪಡೆಯುವ ಅರ್ಹತೆ ಇಲ್ಲ ಎಂಬ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಇದನ್ನೆಲ್ಲಾ ಗಮನಿಸಿದರೆ ವಿ. ಶ್ರೀನಿವಾಸ ಪ್ರಸಾದ್‌ ಇನ್ನು ಮುಂದೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುವುದಕ್ಕೆ ಸೀಮಿತವಾಗು ತ್ತಾರೆಯೇ ಹೊರತು ದಲಿತ ನಾಯಕರಾಗಿ ಉಳಿಯುವುದಿಲ್ಲ. ಒಬ್ಬ ಸ್ವಾಭಿಮಾನಿಗೆ ಇದಕ್ಕಿಂತ ಹೆಚ್ಚು ಅವಮಾನ ಮಾಡಲು ಸಾಧ್ಯವಿಲ್ಲ, ಪ್ರಸ್ತುತ ಬೆಳವಣಿಗೆಯಿಂದ ಪ್ರಸಾದ್‌ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ.

ವಿ. ಶ್ರೀನಿವಾಸಪ್ರಸಾದ್‌ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ಚುನಾವಣೆ ಎದುರಿಸುತ್ತಿದ್ದು, ಅವರು ಸ್ವತಂತ್ರ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದರೆ ಅವರಿಗೆ ಬೆಂಬಲ ನೀಡುತ್ತಿದ್ದೆ. ಆದರೆ ಅವರು ಕೋಮುವಾದಿ ಗಳೊಂದಿಗೆ ಸೇರುವ ಮೂಲಕ ಅಂಬೇಡ್ಕರ್‌ ಚಿಂತನೆಗಳನ್ನು ಮೂಲೆ ಗುಂಪು ಮಾಡಿರುವುದು, ರಾಜಕೀಯ ವ್ಯಭಿಚಾರ ವಾಗಿದೆ ಎಂದು ಅವರು ಕಿಡಿಕಾಡಿದರು.
 

Advertisement

Udayavani is now on Telegram. Click here to join our channel and stay updated with the latest news.

Next