Advertisement

ಚುನಾವಣಾ ಪ್ರಚಾರಕ್ಕಿಲ್ಲದ ಕೋವಿಡ್ ನಿಯಮ ಗಣೇಶೋತ್ಸವಕ್ಕೆ ಯಾಕೆ?: ಮುತಾಲಿಕ್

03:38 PM Aug 30, 2021 | Team Udayavani |

ಹುಬ್ಬಳ್ಳಿ: ಚುನಾವಣೆ, ಪ್ರಚಾರ, ರ್ಯಾಲಿಗಳಿಗೆ ಇಲ್ಲದ ಕೋವಿಡ್ ನಿಯಮ ಗಣೇಶೋತ್ಸವಕ್ಕೆ ಯಾಕೆ? ಕೋವಿಡ್ ನಿಯಮ ಅನುಸರಿಸಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ನಿವಾಸದೆದುರು ಸೋಮವಾರ ಪ್ರತಿಭಟಿಸಿದರು.

Advertisement

ಸಾರ್ವಜನಿಕ ಗಣೇಶೋತ್ಸವ ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗುತ್ತದೆ. ಮೂರ್ತಿ ಕಲಾವಿದರು, ಪೆಂಡಾಲ್, ಹೂ-ಹಣ್ಣು ವ್ಯಾಪಾರಿಗಳಿಗೆ ತೊಂದರೆ ಆಗುತ್ತದೆ. ವರ್ಷಪೂರ್ತಿ ಇವರಿಗೆ ಇದೇ ಆದಾಯದ ಮೂಲವಾಗಿದೆ ಎಂದರು.

ಇದನ್ನೂ ಓದಿ:ಶಾಲೆಗಳ ಆರಂಭದ ಕುರಿತು ಸಿಎಂ ನಿರ್ಧಾರ: ಸಚಿವ ಬಿ.ಸಿ.ನಾಗೇಶ್

ಒಂದು ವೇಳೆ ಸರ್ಕಾರ ಅನುಮತಿಸದಿದ್ದರೆ ನಾನು ಇದ್ದೇನೆ. ರಾಜ್ಯಾದ್ಯಂತ ಎಲ್ಲ ಗಣೇಶೋತ್ಸವ ಮಂಡಳಿಯವರು ಅದ್ದೂರಿಯಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಿ. ಅದ್ಯಾವ ಶಕ್ತಿ ತಡೆಯುತ್ತದೆಯೋ ನಾನು ನೋಡುತ್ತೇನೆ ಎಂದು ಸವಾಲು ಹಾಕಿದರು.

ನಂತರ ಮಾಜಿ ಸಿಎಂ ಶೆಟ್ಟರಗೆ ಮನವಿ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next