Advertisement

Prakarana Tanikha Hantadallide Movie; ಟ್ರೇಲರ್‌ ನಲ್ಲಿ ಪ್ರಕರಣದ ವಿವರ

06:33 PM Sep 23, 2024 | Team Udayavani |

“ಪ್ರಕರಣ ತನಿಖಾ ಹಂತದಲ್ಲಿದೆ’ ಎಂಬ ಸಿನಿಮಾವೊಂದು ತಯಾರಾಗಿದೆ. ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಅಕ್ಟೋಬರ್‌ 18ರಂದು ತೆರೆ ಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದೆ ತಂಡ. ಈ ಚಿತ್ರವನ್ನು ಚಿಂತನ್‌ ಕಂಬಣ್ಣ ನಿರ್ಮಿಸುತ್ತಿದ್ದು, ಅವರ ತಂದೆ ಡಾ.ಶಿವಣ್ಣ ಟ್ರೇಲರ್‌ ರಿಲೀಸ್‌ ಮಾಡಿ ಶುಭಕೋರಿದರು.

Advertisement

ಚಿತ್ರದ ಟೈಟಲ್‌ ಟ್ರ್ಯಾಕ್‌ಗೆ ಶಿವಣ್ಣ ಅವರೇ ಸಾಹಿತ್ಯ ಬರೆದಿದ್ದಾರೆ. ಸುಂದರ್‌ ಎಸ್‌. ಈ ಚಿತ್ರದ ನಿರ್ದೇಶಕರು. ಚಿತ್ರದ ಬಗ್ಗೆ ಮಾತನಾಡುವ ಚಿಂತನ್‌, “ನಾನು ನಟನೆಯತ್ತ ಆಕರ್ಷಿತನಾಗಿ ರಂಗ ತಂಡಗಳೊಂದಿಗೆ ಸೇರಿಕೊಂಡಾಗ ನಿರ್ದೇಶಕ ಸುಂದರ್‌ ಎಸ್‌. ಮತ್ತು ತಂಡದ ಪರಿಚಯವಾಯಿತು. ಆ ಹಂತದಲ್ಲಿ ಸುಂದರ್‌ ಅವರು ರೆಡಿ ಮಾಡಿಟ್ಟುಕೊಂಡಿದ್ದ ಕಥೆಯೊಂದು ಇಷ್ಟವಾಗಿ, ಅದನ್ನು ತಾವೇ ನಿರ್ಮಾಣ ಮಾಡಲು ನಿರ್ಧರಿಸಿದೆ’ ಎಂದರು.

ನಿರ್ದೇಶಕ ಸುಂದರ್‌ ಎಸ್‌. ಮಾತನಾಡಿ, “ಈ ತಂಡದಲ್ಲಿರುವವರೆಲ್ಲರೂ ರಂಗಭೂಮಿ ಹಿನ್ನೆಲೆಯವರು. ಈಗಿರುವ ಟ್ರೆಂಡ್‌ಗೆ ಈ ಕಥೆ ಹೊಂದಿಕೆಯಾಗುತ್ತದೆ’ ಎಂದು ಹೇಳಿದರು.

ಕರದಾಯಾಮ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿರುವ ಚಿಂತನ್‌ ಕಂಬಣ್ಣ ಒಂದು ಪಾತ್ರದಲ್ಲಿಯೂ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next