Advertisement

Prajwal Case: ನಿಲುವಳಿಗೆ ಅನುಮತಿ ಕೋರಿ ಸ್ಪೀಕರ್‌ಗೆ ಪತ್ರ

01:31 AM Jul 17, 2024 | Team Udayavani |

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ವಿಧಾನಸಭೆಯಲ್ಲಿ ಪ್ರಸ್ತಾವಿಸಲು ಕಾಂಗ್ರೆಸ್‌ ಮುಂದಾಗಿದ್ದು ನಿಲುವಳಿ ಸೂಚನೆ ಮಂಡನೆಗೆ ನಯನಾ ಮೋಟಮ್ಮ ಸೇರಿದಂತೆ ಕಾಂಗ್ರೆಸ್‌ನ ಮಹಿಳಾ ಸದಸ್ಯರು ಅನುಮತಿ ಕೋರಿ ಸ್ಪೀಕರ್‌ಗೆ ಪತ್ರ ಕೊಟ್ಟಿದ್ದಾರೆ.

Advertisement

ಈ ವಿಚಾರ ಚರ್ಚೆಗೆ ಬಾರದಂತೆ ತಡೆಯಲು ಜೆಡಿಎಸ್‌ ಕೂಡ ಸಿದ್ಧತೆ ಮಾಡಿಕೊಂಡಿದ್ದು ಪ್ರಸ್ತಾವನೆಯನ್ನು ನಿರಾಕರಿಸುವಂತೆ ಸ್ಪೀಕರ್‌ ಮೇಲೆ ಒತ್ತಡ ಹಾಕಲು ತಯಾರಿ ನಡೆಸಿದೆ.

ಈ ವಿಚಾರವಾಗಿ ಮಾತನಾಡಿರುವ ಜೆಡಿಎಸ್‌ ಶಾಸಕಾಂಗ ನಾಯಕ ಸುರೇಶ್‌ಬಾಬು, ಈ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಅದು ನಿಷ್ಪಕ್ಷವಾಗಿ ನಡೆಯಬೇಕು ಎಂಬುದಷ್ಟೇ ನಮ್ಮೆಲ್ಲರ ಆಗ್ರಹ. ಯಾರೂ ತನಿಖೆಗೆ ಅಡ್ಡಿಪಡಿಸುವುದಿಲ್ಲ. ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವುದು ನ್ಯಾಯಾಂಗ ಬಿಕ್ಕಟ್ಟಿಗೆ ಕಾರಣವಾಗಬಹುದು. ಆದ್ದರಿಂದ ಅವಕಾಶ ನೀಡಬಾರದೆಂದು ಒತ್ತಾಯಿಸು ತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next