Advertisement

ಅಂಜನಾದ್ರಿ ಆಂಜನೇಯನ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

12:07 PM Nov 03, 2015 | Mithun PG |

ಗಂಗಾವತಿ: ತಾಲೂಕಿನ ಅಂಜನಾದ್ರಿಯ ಬೆಟ್ಟಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.

Advertisement

ಬಳಿಕ ಮಾತನಾಡಿದ ಅವರು, ಹನುಮಂತನ ಜನ್ಮ ಸ್ಥಳ ಕಿಷ್ಕಿಂಧೆಯ ಗುಡ್ಡಪ್ರದೇಶ ತುಂಗಭದ್ರಾ ನದಿಯ ಮಡಿಲು ಅದ್ಭುತ ಸೌಂದರ್ಯದ ತಾಣವಾಗಿದೆ. ಹನುಮಂತ ಜನಿಸಿದ ಸ್ಥಳ ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ಸಂಗತಿ. ಸರಕಾರ ಇಲ್ಲಿಗೆ ಆಗಮಿಸುವ ದೇಶ ವಿದೇಶದ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕು.

ಪ್ರತಿ ವರ್ಷ ಹನುಮ‌ ಜಯಂತಿಯನ್ನು ಅಂಜನಾದ್ರಿಯಲ್ಲಿ ಆಚರಿಸುವಂತೆ, ಪ್ರತಿ ಹನುಮ ಭಕ್ತರ ಮನೆಯಲ್ಲಿ ಹನುಮಾನ್ ಚಾಲಿಸಾ ಪಠಣಾ ಮಾಡುವ ಮೂಲಕ ಏಕಾಗ್ರತೆ ಸಾಧಿಸಲು ಸಾಧ್ಯ. ಯುವಕರು‌ ದುಶ್ಚಟ ಬಿಟ್ಟು ಆಂಜನೇಯನಂತೆ ಆರೋಗ್ಯ ಕಾಪಾಡಿಕೊಳ್ಳುಬೇಕೆಂದು ಕಿವಿ ಮಾತು ಹೇಳಿದರು.

ಇದೇ ವೇಳೆ ಕೋವಿಡ್ ರೋಗ ತಡೆಗಟ್ಟಲು ಪ್ರತಿಯೊಬ್ಬರು ಸರಕಾರದ ಜತೆ ಕೈ ಜೋಡಿಸುವಂತೆ ಮನವಿ ಮಾಡಿದರು. ಪಿಎಸ್ ಐ ಜೆ.ದೊಡ್ಡಪ್ಪ, ದೇಗುಲಸಮಿತಿ ಸದಸ್ಯರು  ದೇಗುಲದ ವತಿಯಿಂದ ಪುನೀತ್ ರಾಜಕುಮಾರ್ ಅವರಿಗೆ ಸನ್ಮಾನಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next