Advertisement

“ಪೋಸ್ಟ್‌ ಕಾರ್ಡ್‌’ವಿರುದ್ಧ ರೈ ದೂರು

12:32 PM Apr 05, 2018 | Team Udayavani |

ಬೆಂಗಳೂರು: ತಮ್ಮ ವಿರುದ್ಧ ಕೆಲ ತಿಂಗಳುಗಳಿಂದ ಅವಹೇಳನಕಾರಿ ಲೇಖನಗಳನ್ನು ಪ್ರಕಟಿಸುತ್ತಿದೆ ಎಂದು ಆರೋಪಿಸಿ, ನಟ ಪ್ರಕಾಶ್‌ ರೈ ಅವರು, “ಪೋಸ್ಟ್‌ಕಾರ್ಡ್‌ ನ್ಯೂಸ್‌’ ಜಾಲತಾಣದ ವಿರುದ್ಧ ನಗರದ ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ತಮ್ಮ ದೂರಿನಲ್ಲಿ, “ಕಳೆದ ವರ್ಷ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾಗಿನಿಂದಲೂ “ಪೋಸ್ಟ್‌ಕಾರ್ಡ್‌ ನ್ಯೂಸ್‌’, ನನ್ನ ವಿರುದ್ಧ ಅಪಪ್ರಚಾರಕ್ಕಿಳಿದಿದೆ. ಕೆಲ ತಿಂಗಳಿಂದ ನನ್ನ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸುತ್ತಿದೆ’ ಎಂದು ರೈ ವಿವರಿಸಿದ್ದಾರೆ. ಇತ್ತೀಚೆಗಷ್ಟೇ, ಈ ಜಾಲ ತಾಣದ ಸಹ ಸಂಸ್ಥಾಪಕ ಹಾಗೂ ಸಂಪಾದಕ ಮಹೇಶ್‌ ವಿಕ್ರಂ ಹೆಗ್ಡೆಯವರನ್ನು ಸುಳ್ಳು ಸುದ್ದಿಯೊಂದನ್ನು ಹರಡಿದ್ದ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next