Advertisement

ಮಕ್ಕಳಿಗೆ ಪಾಸಿಟಿವ್‌ ಸ್ಪರ್ಶ

08:23 PM Dec 20, 2019 | Team Udayavani |

ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ, ಎಸ್ಸೆಸ್ಸೆಲ್ಸಿ ಹಾಗೂ ಕಾಲೇಜು ಮಕ್ಕಳಿಗಾಗಿ “ಸಕಾರಾತ್ಮಕ ಚಿಂತನೆ- ಅಗಾಧ ಶಕ್ತಿಯ ಗುಟ್ಟು’ ಎಂಬ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ತರಬೇತುದಾರ ಎಚ್‌.ಎ. ಜಯಸಿಂಹ ಅವರು, ಪರೀಕ್ಷೆಗಳನ್ನು ಎದುರಿಸಲು ಬೇಕಾದ ಧೈರ್ಯ, ಕೌಶಲ ಹಾಗೂ ಸಿದ್ಧತೆಗಳ ಕುರಿತು ಮಾತನಾಡಲಿದ್ದಾರೆ. ಇದು ಸಂವಾದಾತ್ಮಕ ಕಾರ್ಯಾಗಾರವಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಬಹುದು. ಆಸಕ್ತರು, ಭಾನುವಾರ ಬೆಳಗ್ಗೆ 9 ಗಂಟೆಗೆ ಯೋಗ ಕೇಂದ್ರದಲ್ಲಿ ಹೆಸರು ನೋಂದಾಯಿ­ಸಬೇಕು. ನೋಟ್‌ಪ್ಯಾಡ್‌ ಹಾಗೂ ಪೆನ್‌ ಜೊತೆಗಿರಲಿ.

Advertisement

ಎಲ್ಲಿ?: ಎಸ್‌ಪಿವಿ ಯೋಗ ಕೇಂದ್ರ, ಶ್ರೀ ಪ್ರಸನ್ನ ವೀರಾಂಜನೇಯ ದೇವಸ್ಥಾನ, ಮಹಾಲಕ್ಷ್ಮಿಪುರ
ಯಾವಾಗ?: ಡಿ. 22, ಭಾನುವಾರ ಬೆಳಗ್ಗೆ 9- 12
ಪ್ರವೇಶ: ಉಚಿತ
ಹೆಚ್ಚಿನ ಮಾಹಿತಿಗೆ: 9845050333

Advertisement

Udayavani is now on Telegram. Click here to join our channel and stay updated with the latest news.

Next