Advertisement

ಭಿವಂಡಿ ರಾಜೀವ್‌ ಗಾಂಧಿ ಸೇತುವೆ ಆಂಶಿಕ ಕುಸಿತ, ವಾಹನ ಸಂಚಾರ ಬಂದ್‌

04:11 PM Sep 05, 2018 | Team Udayavani |

ಮುಂಬಯಿ : ಮಹಾರಾಷ್ಟ್ರದ ಪ್ರಸಿದ್ಧ ವಿದ್ಯುನ್ಮಗ್ಗ ಪಟ್ಟಣವಾಗಿರುವ ಭಿವಂಡಿಯಲ್ಲಿನ ರಾಜೀವ್‌ ಗಾಂಧಿ ಸೇತುವೆ ಇಂದು ಬುಧವಾರ ಆಂಶಿಕವಾಗಿ ಕುಸಿದಿದ್ದು ವಾಹನ ಸಂಚಾರವನ್ನು ಬಂದ್‌ ಮಾಡಲಾಗಿದೆ. 

Advertisement

ರಾಜೀವ್‌ ಗಾಂಧಿ ಫ್ಲೈ ಓವರ್‌ನ ಒಂದು ಸ್ಲಾಬ್‌ ನಲ್ಲಿ ಅತ್ಯಂತ ಅಪಾಯಕಾರಿ ಬಿರುಕು ಕಂಡು ಬಂದುದನ್ನು ಅನುಸರಿಸಿ ಒಡನೆಯೇ ವಾಹನ ಸಂಚಾರವನ್ನು ನಿಲ್ಲಿಸಲಾಯಿತು. 

ಮೊನ್ನೆ ಸೋಮವಾರವಷ್ಟೇ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು ದಹೀ ಹಾಂಡಿ ಉತ್ಸವ ಪ್ರಯುಕ್ತ ಪಟ್ಟಣಕ್ಕೆ ಭೇಟಿ ಕೊಡಲು ಇದೇ ಸೇತುವೆಯ ಮೂಲಕ ಸಾಗಿ ಬಂದಿದ್ದರು. 

ಭಿವಂಡಿ ನಿಜಾಮ್‌ಪುರ ಮುನಿಸಿಪಲ್‌ ಕಮಿಷನರ್‌ ಮನೋಹರ ಹಿರೇ ಮತ್ತು ವಿಪತ್ತು ನಿರ್ವಹಣಾ ದಳದ ಮುಖ್ಯಸ್ಥ ಸುರೇಶ್‌ ಗಾಯಕ್‌ವಾಡ್‌ ಷವರು ಇಂದು ಬೆಳಗ್ಗೆ ಬಿರುಕು ಬಿಟ್ಟ ಸೇತುವೆಯನ್ನು ವೀಕ್ಷಿಸಿ ವಾಹನ ಸಂಚಾರ ಬಂದ್‌ ಮಾಡುವ ನಿರ್ಧಾರ ಕೈಗೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next