Advertisement

ಕೈ ಗೆದ್ದರೆ ರಾಜಕೀಯ ನಿವೃತ್ತಿ: ತೇಲ್ಕೂರ

10:32 AM Dec 10, 2021 | Team Udayavani |

ಚಿಂಚೋಳಿ: “ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೆ ನಾನು ರಾಜಕೀಯ ಕ್ಷೇತ್ರದಿಂದಲೇ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಜಯಶಾಲಿಯಾದರೆ ಡಾ| ಶರಣ ಪ್ರಕಾಶ ಪಾಟೀಲ ರಾಜಕಿಯದಿಂದ ನಿವೃತ್ತಿ ಹೊಂದಬೇಕು’ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲಗೆ ಸವಾಲು ಹಾಕಿದ್ದಾರೆ.

Advertisement

ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಯಾದಗಿರಿ-ಕಲಬುರಗಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಹೆಚ್ಚಿನ ಹೆಚ್ಚು ಮತಗಳ ಅಂತರದಿಂದ ಬಿ.ಜಿ. ಪಾಟೀಲ ಗೆಲವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಪಂಚಾಯಿತಿ ವ್ಯವಸ್ಥೆ ಬಗ್ಗೆ ಅರಿತವರು ಹಾಗೂ ಗುಣವಂತರು ಆಗಿದ್ದಾರೆ. ದಾನ-ಧರ್ಮ ಮಾಡುವ ಮನೆತನದವರಾಗಿದ್ದಾರೆ, ಆದರೆ ಕಾಂಗ್ರೆಸ್‌ ಪಕ್ಷದವರು ಬಿ.ಜಿ. ಪಾಟೀಲರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಮಿಕ್ರಾನ್‌ ವೈರಸ್‌ ದೇಶದಲ್ಲಿ ಬರಲು ನರೇಂದ್ರ ಮೋದಿ ಅವರೇ ಹೊಣೆಗಾರರು ಎಂದು ಡಾ| ಶರಣಪ್ರಕಾಶ ಪಾಟೀಲ ಹೇಳಿಕೆ ಖಂಡನಿಯವಾಗಿದೆ. ಈ ತರಹದ ಹೇಳಿಕೆ ನಿಲ್ಲಿಸಬೇಕು ಎಂದು ಹೇಳಿದರು.

ಅತೀಷ ಪವಾರ್‌, ಮಹೇಶ ಬೆಳಮಗಿ, ಶಿವಲಿಂಗಯ್ಯ ಶಾಸ್ತ್ರೀ, ನಾಗುರಾವ್‌ ಬಸೂದೆ, ಮಲ್ಲಿಕಾರ್ಜುನ ಪಾಳೆದ, ಸುಭಾಷ ಪಾಟೀಲ, ರುದ್ರಶೆಟ್ಟಿ ನಿಂಗದಳ್ಳಿ, ವಿಜಯಕುಮಾರ ಮೇದರ್‌, ರುದ್ರಮುನಿ ರಾಮತೀರ್ಥಕರ್‌, ಶರಣಬಸಪ್ಪ ಸೊಂತ, ಶರೀಫಮಿಯಾ ಕೋಹಿರ್‌ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next