Advertisement

Uppinangady ಗುಡ್ಡ ಜರಿತಕ್ಕೆ ಹೂತು ಹೋದ ಪೊಲೀಸ್‌ ವಾಹನ

12:09 AM Jul 23, 2024 | Team Udayavani |

ಉಪ್ಪಿನಂಗಡಿ: ಸತತ ಗುಡ್ಡ ಕುಸಿತಕ್ಕೆ ಸಿಲುಕಿರುವ ಶಿರಾಡಿ ಘಾಟ್‌ ಪರಿಸರದಲ್ಲಿ ಮತ್ತೆ ಗುಡ್ಡ ಜರಿತ ಸಂಭವಿಸಿದ್ದು, ಪೊಲೀಸ್‌ ವಾಹನವೊಂದು ಗುಡ್ಡ ಜರಿತದ ಮಣ್ಣಿನಲ್ಲಿ ಸಿಲುಕಿದೆ.

Advertisement

ಶಿರಾಡಿ ಘಾಟ್‌ ಪರಿಸರದ ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಣ್ಣು ಜರಿತ ಸಂಭವಿಸಿದ್ದು, ಸಂಚಾರ ನಿಯಂತ್ರಣದ ಕಾರಣಕ್ಕೆ ಹೆದ್ದಾರಿ ಬದಿ ನಿಲ್ಲಿಸಲಾದ ಪೊಲೀಸ್‌ ಇಲಾಖೆಯ ವಾಹನವೇ ಗುಡ್ಡ ಜರಿತದ ಮಣ್ಣಿನ ಸಿಲುಕಿದೆ. ತತ್‌ಕ್ಷಣವೇ ಮಣ್ಣನ್ನು ತೆರವುಗೊಳಿಸಿ ಪೊಲೀಸ್‌ ವಾಹನವನ್ನು ಮೇಲಕ್ಕೆತ್ತಿ ಸ್ಥಳಾಂತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next