Advertisement

Parliament “ಹೊಗೆ ಗ್ಯಾಂಗ್‌’ ಆರೋಪಿಗಳಿಗೆ ಸುಳ್ಳು ಪತ್ತೆ ಪರೀಕ್ಷೆಗೆ ಪೊಲೀಸರ ಮನವಿ

11:37 PM Dec 28, 2023 | Team Udayavani |

ಹೊಸದಿಲ್ಲಿ: ಸಂಸತ್‌ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲ ಆರು ಮಂದಿ ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡಬೇಕು ಎಂದು ಕೋರಿ ದಿಲ್ಲಿ ಪೊಲೀಸರು ಗುರುವಾರ ದಿಲ್ಲಿಯಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

Advertisement

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಹರ್ದೀಪ್‌ ಕೌರ್‌ ಅವರಿದ್ದ ನ್ಯಾಯಪೀಠ, ಆರೋಪಿಗಳ ಪರವಾದ ಕೆಲವು ವಕೀಲರು ಹಾಜರಿಲ್ಲದ ಕಾರಣ ಮುಂದಿನ ವಿಚಾರಣೆಯನ್ನು ಜ.2ಕ್ಕೆ ಮುಂದೂಡಿತು. ಆರೋಪಿಗಳಾದ ಮನೋರಂಜನ್‌, ಸಾಗರ್‌ ಶರ್ಮಾ, ಅಮೋಲ್‌ ಧನ್‌ರಾಜ್‌ ಶಿಂಧೆ, ನೀಲಂ ದೇವಿ, ಲಲಿತ್‌ ಝಾ ಮತ್ತು ಮಹೇಶ್‌ ಕುಮಾವಟ್‌ ಪ್ರಸ್ತುತ ಜ.5ರವರೆಗೆ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next