Advertisement

ಕೃಷಿ ಹೊಂಡದ ನೀರಿಗೆ ವಿಷ ಹಾಕಿದ ಕಿಡಿಗೇಡಿಗಳು: ಮೀನುಗಳ ಸಾವು

04:20 PM Sep 15, 2021 | Team Udayavani |

ಮುಳಬಾಗಿಲು: ತಾಲೂಕಿನ ಚಿಕ್ಕಗುಟ್ಟಹಳ್ಳಿ ಗ್ರಾಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಸಿ. ವೆಂಕಟರಾಮಪ್ಪ ಅವರ ಕೃಷಿ ಹೊಂಡದಲ್ಲಿ
ಸಾಕಾಣಿಕೆ ಮಾಡಲಾಗಿದ್ದ ಮೀನುಗಳಿಗೆ ಅಪರಿಚಿತ ವ್ಯಕ್ತಿಗಳು ವಿಷ ಹಾಕಿ ಸಾಯಿಸಿರುವ ಘಟನೆ  ಬೆಳಕಿಗೆ ಬಂದಿದೆ.

Advertisement

ಕಳೆದ 11 ತಿಂಗಳಿನಿಂದ 11 ಸಾವಿರ ವಿವಿಧ ಬಗೆಯ ಮೀನಿನ ತಳಿಗಳನ್ನು ಕೃಷಿ ಹೊಂಡದಲ್ಲಿ ಸಾಕಾಣಿಕೆ ಮಾಡಲಾಗುತ್ತಿತ್ತು. ಕೆಲ ವ್ಯಕ್ತಿಗಳು
ಆಗಾಗ ಮೀನಿಗೆ ವಿಷ ಪ್ರಯೋಗಗಳನ್ನು ಮಾಡುತ್ತಿದ್ದು, ಮೀನುಗಳು ಕೆಲವು ಮಾತ್ರ ಸಾಯುತ್ತಿದ್ದವು, ಆದರೆ, ವಿಷ ಪ್ರಯೋಗ ಆಗಿರುವ ಬಗ್ಗೆ ಯಾವುದೇ ರೀತಿಯ ಮಾಹಿತಿ ದೊರೆಯುತ್ತಿಲ್ಲ, ಇದೀಗ 9 ಸಾವಿರ ಮೀನುಗಳು ಏಕಕಾಲದಲ್ಲಿ ಸಾವನ್ನಪ್ಪಿದ ಕಾರಣದಿಂದ ವಿಷ ಪ್ರಯೋಗ ನಡೆದಿರಬಹುದೆಂದು ನಂಬಲಾಗಿದೆ ಎಂದು ಮೀನು ಸಾಕಾಣಿಕೆದಾರ ವೆಂಕಟ ರಾಮಪ್ಪ ತಿಳಿಸಿದರು.

ಇದನ್ನೂ ಓದಿ:ಹಿಂದೂಗಳು ಇಡೀ ಜಗತ್ತಿನಲ್ಲಿಯೇ ಅತ್ಯಂತ ಸಹಿಷ್ಣುತೆ ಹೊಂದಿರುವವರು: ಜಾವೇದ್ ಅಖ್ತರ್

ಬೇತಮಂಗಲದಲ್ಲಿ ರಾಹು ಮತ್ತು ಸಿಸಿ ತಲಾ 2 ಸಾವಿರ, ಆಂಧ್ರಪ್ರದೇಶದಿಂದ ಒಂದು ಮೀನಿಗೆ 6 ರೂ. ನಂತೆ 6 ಸಾವಿರ ಹಾಗೂ ಮುಳಬಾಗಿಲಿನ ಕೃಷಿ ಇಲಾಖೆಯಿಂದ 1 ಸಾವಿರ ಮೀನು ಸಾಕಾಣಿಕೆ ಮಾಡಲಾಗುತ್ತಿತ್ತು. ಆದರೆ, ಈಗ ಮೀನು ಸತ್ತಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ವೆಂಕಟರಾಮಪ್ಪ ಅಳಲು ತೊಡಗಿಕೊಂಡರು. ಈ ಕುರಿತು ನಂಗಲಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next