Advertisement

ಪಿಎಂಸಿ ಬ್ಯಾಂಕ್‌ ವಂಚನೆ ಪ್ರಕರಣ: ಸ್ಥಳಾಂತರ ಆದೇಶಕ್ಕೆ ತಡೆ

09:48 AM Jan 17, 2020 | |

ಹೊಸದಿಲ್ಲಿ: ಬಹು ಕೋಟಿ ಮೌಲ್ಯದ ಪಿಎಂಸಿ ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಎಚ್‌ಡಿಐಎಲ್‌ ಸಂಸ್ಥೆಯ ಪ್ರವರ್ತಕ ವಾಧ್ವಾನಿ ಸಹೋದರರನ್ನು ಜೈಲಿನಿಂದ ಮನೆಗೆ ಸ್ಥಳಾಂತರಗೊಳಿಸಲು ಅನುಮತಿ ನೀಡಿದ್ದ ಬಾಂಬೆ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ಆಂಶಿಕ ತಡೆ ನೀಡಿದೆ.

Advertisement

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿ ಬಾಂಬೆ ಹೈಕೋರ್ಟ್‌ ಆದೇಶದಿಂದಾಗಿ ಬಂಧಿತರನ್ನು ಬಿಡುಗಡೆ ಮಾಡುವವರೆಗೆ ತಲುಪಿದಂತಾಗಿದೆ. ಆದರೆ ಕೋರ್ಟ್‌ ನೇಮಿಸಿದ ಆಯುಕ್ತರ ಉಸ್ತುವಾರಿಯಲ್ಲಿ ಸಂಸ್ಥೆಯ ಆಸ್ತಿ ಮಾರಾಟ ಪ್ರಕ್ರಿಯೆ ನಡೆಯಲಿ ಎಂದರು. ಬುಧವಾರದ ವಿಚಾರಣೆಯಲ್ಲಿ ಹೈಕೋರ್ಟ್‌, ವಾಧ್ವಾನಿ ಸಹೋದರರನ್ನು ಇಬ್ಬರು ಜೈಲಧಿಕಾರಿಗಳ ಉಸ್ತುವಾರಿಯಲ್ಲಿ ಅರ್ಥರ್‌ ರೋಡ್‌ ಜೈಲಿಂದ ಮನೆಗೆ ಸ್ಥಳಾಂತರಿಸಬೇಕು ಎಂದು ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next