Advertisement

ಮೋದಿ ಸಾಧನೆಗೆ ಅಪಾರ ಜನಮನ್ನಣೆ: ಸಂಸದ

06:24 AM Jun 03, 2020 | Lakshmi GovindaRaj |

ತುಮಕೂರು: ಒಂದು ದೇಶ, ಒಂದು ಶುಲ್ಕ, ಒಂದು ದೇಶ ಒಂದು ಪಡಿತರ ಕಾರ್ಡ್‌ ಮೂಲಕ ಇಡೀ ದೇಶಕ್ಕೆ ಮಾದರಿ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ಸಾಧನೆಗೆ ಅಪಾರ ಜನಮನ್ನಣೆ ವ್ಯಕ್ತವಾ ಗಿದೆ ಎಂದು ಸಂಸದ ಜಿ.ಎಸ್‌. ಬಸವರಾಜು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತ ನಾಡಿ, 135 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಅಭಿವೃದ್ಧಿಗೆ ಒತ್ತು ನೀಡಿ, ಅನೇಕ ಕಾರ್ಯ ಕ್ರಮಗಳನ್ನು ರೂಪಿಸಿದ್ದಾರೆ ಎಂದರು.

Advertisement

ತ್ರಿವಳಿ ತಲಾಕ್‌, ಸಂವಿಧಾನದ 371ನೇ  ವಿಧಿ ರದ್ದು, ಅಯೋಧ್ಯೆ ವಿಚಾರ ದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು, ಸುಮಾರು 72 ವರ್ಷಗಳ ಹೋರಾಟಕ್ಕೆ ಅಂತಿಮ ತೆರೆ ಬಿದ್ದು, ಜಾತಿ, ಧರ್ಮ ರಹಿತವಾದ ತೀರ್ಪನ್ನು ಎಲ್ಲರೂ ಸ್ವಾಗ ತಿಸಿ, ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ  ಸರ್ಕಾರ ಅಗತ್ಯ ಕ್ರಮ ಕೈಗೊಂಡಿ ರುವುದು ಸ್ವಾಗತಾರ್ಹ ಎಂದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಗಲ್ಲುಶಿಕ್ಷೆ ನೀಡುವಂಥ ತೀರ್ಮಾನ ಕೈಗೊಂಡು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನನ್ನು ಜಾರಿಗೆ  ತಂದಿದ್ದು, ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ಎಂದು ತಿಳಿಸಿದರು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ನಿರ್ಧಾರ ರೈತ ವಿರೋಧಿಯಲ್ಲ.

ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದ್ದು, ಸಂಜೀವಿನಿ  ಕೊಟ್ಟಂತಾಗುತ್ತದೆ. ಆನ್‌ಲೈನ್‌ನಲ್ಲಿ ಎಲ್ಲ ವ್ಯವಹಾರ ನಡೆಯು ವುದರಿಂದ ಮಾರುಕಟ್ಟೆಯಲ್ಲಿ ತೂಕ ಮತ್ತು ಅಳತೆಯಲ್ಲಿ ಆಗುತ್ತಿದ್ದ ಮೋಸ ರೈತರ ಶೋಷಣೆ ತಪ್ಪಿ ಅವರ ಮನೆ ಬಾಗಿಲಿಗೆ ಹಣ ಸಂದಾಯ ವಾಗಲಿದೆ ಎಂದರು.  ಕರ್ನಾಟಕ ರಾಜ್ಯದ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳನ್ನು ಟಾರ್ಗೆಟ್‌ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಕೋವಿಡ್‌-19 ವಿಷಯದಲ್ಲಿ ಭಾರತ  ದೇಶಕ್ಕೆ 8ನೇ ಸ್ಥಾನ ದೊರೆತಿದ್ದು, ಕೇಂದ್ರ ಸರ್ಕಾರ ಇದನ್ನು ನಿಯಂತ್ರಿಸಲು ವಿಫ‌ಲವಾಗಿದೆ ಎಂದು ಹೇಳಿದರು. ಮಾಜಿ ಶಾಸಕರಾದ ಗಂಗ ಹನುಮಯ್ಯ, ಡಾ. ಎಂ.ಆರ್‌.ಹುಲಿ ನಾಯ್ಕರ್‌, ಬಿಜೆಪಿ ರಾಜ್ಯ  ರೈತಮೋರ್ಚಾ ಉಪಾಧ್ಯಕ್ಷ ಎಸ್‌. ಶಿವಪ್ರಸಾದ್‌, ಹೆಬ್ಟಾಕ ರವಿಶಂಕರ್‌, ಕೊಪ್ಪಳ್‌ ನಾಗರಾಜ್‌, ಲಕ್ಷ್ಮೀಶ್‌, ರಂಗನಾಯಕ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next