Advertisement

ಸಂತರಿಗೆ ಭಿಕ್ಷೆ  ಕೊಡದ ಕಾಲದಲ್ಲಿ  ಮೋದಿ ನನಗೆ ಯುಪಿಯನ್ನೇ ಕೊಟ್ಟರು

08:57 AM Mar 30, 2017 | Team Udayavani |

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಗುಣಗಾನ ಮಾಡಿದ್ದಾರೆ.

Advertisement

ಬುಧವಾರ ಮಾತನಾಡಿದ ಮುಖ್ಯಮಂತ್ರಿ ಯೋಗಿ ‘ಈಗಿನ ದಿನಗಳಲ್ಲಿ ಜನ ಸಂತರಿಗೆ ಭಿಕ್ಷೆ ಕೊಡಲು ಯೋಚನೆ ಮಾಡುತ್ತಾರೆ. ಅಂತಹುದರಲ್ಲಿ  ನನಗೆ ಪ್ರಧಾನಿ ಮೋದಿ ಜೀ ಉತ್ತರಪ್ರದೇಶವನ್ನೇ ನೀಡಿದರು’ ಎಂದರು. 

‘ಪ್ರಧಾನಿ ಮೋದಿ ಅವರು ಒಬ್ಬ ಆಶಾವಾದಿಯಾಗಿದ್ದು, ನಾನು ಅವರಿಂದ ಸಕಾತ್ಮಕವಾಗಿ ಹೇಗೆ ದೊಡ್ಡ ಕೆಲಸಗಳನ್ನು ಮಾಡಬೇಕೆಂದು ಕಲಿಯುತ್ತಿದ್ದೇನೆ’ ಎಂದರು. 

‘ಅಮಿತ್‌ ಶಾ ಅವರು ನೀವು ಮುಖ್ಯಮಂತ್ರಿಯಾಗಬೇಕು ಎಂದಾಗ ನನ್ನ ಬಳಿ ಕೆಲವೇ ಜೊತೆ ಬಟ್ಟೆಗಳಿದ್ದವು’ ಎಂದು ತನ್ನ ಸನ್ಯಾಸಿ ಜೀವನದ ಚಿತ್ರಣವನ್ನೂ ನೀಡಿದರು. 

‘ನನಗೆ ಉತ್ತರ ಪ್ರದೇಶದ ಕಾಯಿಲೆಗಳು ಯಾವುದೆಂದು ಗೊತ್ತಿವೆ.ಅವುಗಳನ್ನು ನಿರ್ಮೂಲನೆ ಮಾಡಲು ಕೆಲಸ ಮಾಡುತ್ತೇನೆ. ಯಾವುದೇ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ನಾನು ಹಿಂಜರಿಯುವುದಿಲ್ಲ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next