Advertisement

PM  ಮೋದಿಯಿಂದ ರಾಜ್ಯಗಳ ನಡುವೆ ಸಂಘರ್ಷ ತಂದಿಡಲು ಕುತಂತ್ರ: ಸ್ಟಾಲಿನ್‌

02:13 AM May 19, 2024 | Team Udayavani |

ಚೆನ್ನೈ: ಕೋಮುಸಂಘರ್ಷದ ತಂತ್ರಗಳು ಪ್ರಯೋಜ ನಕ್ಕೆ ಬರುತ್ತಿಲ್ಲವೆಂದು ಪ್ರಧಾನಿ ಮೋದಿ ಇದೀಗ ರಾಜ್ಯಗಳ ನಡುವೆ ಸಂಘರ್ಷ ತಂದಿಡಲು ನೋಡುತ್ತಿದ್ದಾರೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಆರೋಪಿಸಿದ್ದಾರೆ.

Advertisement

ಮೋದಿ ಅವರು ಕಾಲ್ಪನಿಕ ಕಥೆಗಳ ಸುಳ್ಳಿನ ಚೀಲವನ್ನು ಜತೆಗೆ ಹೊತ್ತು ತಿರುಗುತ್ತಿದ್ದಾರೆ. ಉತ್ತರ ಪ್ರದೇಶದ ಜನರನ್ನು ದಕ್ಷಿಣದ ನಾಯಕರು ಅವಮಾನಿಸುತ್ತಾರೆ ಎಂಬುದು ಮೋದಿ ಯವರ ಸುಳ್ಳಿನ ಕಥೆ ಎಂದಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಚುನಾವಣೆ ರ್ಯಾಲಿಯಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್‌ ಪಕ್ಷದ ವಿರುದ್ಧ ಮೋದಿ ವಾಗ್ಧಾಳಿ ನಡೆಸಿದ್ದರು. ಈ ವೇಳೆ ಐಎನ್‌ಡಿಐಎ ದಕ್ಷಿಣದ ಮಿತ್ರ ಪಕ್ಷಗಳು ಉತ್ತರ ಪ್ರದೇಶದ ಜನರನ್ನು ನಿಂದಿಸುತ್ತಿದ್ದರೂ ಎಸ್‌ಪಿ ಮತ್ತು ಕಾಂಗ್ರೆಸ್‌ ಮೌನ ವಹಿಸಿರುತ್ತವೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next