Advertisement

ಭಾರತ ನಿರುದ್ಯೋಗ ಸಮಸ್ಯೆಯನ್ನೇ ಎದುರಿಸಬೇಕಾಗಿಲ್ಲ..ಆದರೆ ನಮ್ಮ ಜನರು: ಪ್ರಧಾನಿ ಹೇಳಿದ್ದೇನು?

05:06 PM Apr 16, 2022 | Team Udayavani |

ಅಹಮದಾಬಾದ್: ಭಾರತ ಈ ಸಂದರ್ಭದಲ್ಲಿಯೂ ಬದಲಾಗದೇ ಇರಲು ಸಾಧ್ಯವಿಲ್ಲ. ನಾವೀಗ ಸ್ವಾವಲಂಬಿಯಾಗಬೇಕಾದ ಕಾಲ ಸಮೀಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಏಪ್ರಿಲ್ 16) ಅಭಿಪ್ರಾಯವ್ಯಕ್ತಪಡಿಸಿದ್ದು, ದೇಶದ ಜನರು ಕೇವಲ ಸ್ಥಳೀಯವಾಗಿ ಉತ್ಪಾದಿಸಿದ ವಸ್ತುಗಳನ್ನ ಖರೀದಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

ಇದನ್ನೂ ಓದಿ:ಅಫ್ಘಾನ್ ನಲ್ಲಿ ಏರ್ ಸ್ಟ್ರೈಕ್ ನಡೆಸಿದ ಪಾಕಿಸ್ಥಾನ; ಮಕ್ಕಳು-ಮಹಿಳೆಯರು ಸೇರಿ 30 ಜನರ ಸಾವು!

“ಒಂದು ವೇಳೆ ಜನರು ಮುಂದಿನ 25 ವರ್ಷಗಳ ಕಾಲ ಸ್ಥಳೀಯ ವಸ್ತುಗಳನ್ನು ಬಳಕೆ ಮಾಡಿದಲ್ಲಿ, ನಂತರ ಭಾರತ ನಿರುದ್ಯೋಗ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ” ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ(ಏ.16) ಗುಜರಾತ್ ನ ಮೋರ್ಬಿಯಲ್ಲಿ 108 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಈ ಸಂದರ್ಭದಲ್ಲಿಯೂ ಜಡವಾಗಿರಲು ಸಾಧ್ಯವಿಲ್ಲ. ನಾವು ಎಚ್ಚರದಲ್ಲಿರಲಿ ಅಥವಾ ನಿದ್ರಿಸುತ್ತಿರಲಿ. ನಾವು ಈ ಹಿಂದಿನಂತೆ ಮುಂದುವರಿಯಲು ಸಾಧ್ಯವಿಲ್ಲ. ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಇಡೀ ಪ್ರಪಂಚವೇ ನಾವು ಆತ್ಮನಿರ್ಭರರಾಗುವುದು (ಸ್ವಾವಲಂಬಿ) ಹೇಗೆ ಎಂಬ ಬಗ್ಗೆ ಆಲೋಚಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸ್ಥಳೀಯ ವಸ್ತುಗಳನ್ನೇ ಖರೀದಿಸುವಂತೆ ದೇಶದ ಜನರಿಗೆ ಸಾಧು, ಸಂತರು ಮನವರಿಕೆ ಮಾಡಿಕೊಡಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ನಮ್ಮ ಜನರೇ ತಯಾರಿಸಿದ ವಸ್ತುಗಳನ್ನು ಮಾತ್ರ ನಮ್ಮ ಮನೆಯಲ್ಲಿ ಉಪಯೋಗಿಸಬೇಕು. ಇದರಿಂದಾಗಿ ಭಾರೀ ಸಂಖ್ಯೆಯ ಜನರಿಗೆ ಉದ್ಯೋಗ ಸಿಕ್ಕಂತಾಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next