Advertisement

ಕೇದಾರನಾಥ್‌ ಪುನರ್ನಿರ್ಮಾಣ ವೀಕ್ಷಿಸಿದ ಪ್ರಧಾನಿ ಮೋದಿ

10:16 AM Jun 11, 2020 | mahesh |

ಹೊಸದಿಲ್ಲಿ: ಕೇದಾರನಾಥ ಪುನರ್‌ನಿರ್ಮಾಣ, ಬದರಿನಾಥ್‌ ತೀರ್ಥಕ್ಷೇತ್ರಗಳ ಕಾಮಗಾರಿಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಬುಧವಾರ ವೀಕ್ಷಿಸಿದರು. ಯಾವುದೇ ಪ್ರಕೃತಿ ವಿಕೋಪಗಳನ್ನು ತಡೆದುಕೊಳ್ಳುವಂತೆ, ಹಾಗೆಯೇ ಪರಿಸರ ಸ್ನೇಹಿಯಾಗಿಯೂ ಕಾಮಗಾರಿಗಳನ್ನು ವಿನ್ಯಾಸ ಗೊಳಿಸುವಂತೆ ಮೋದಿ ಉತ್ತರ ಖಂಡ ಸರಕಾರಕ್ಕೆ ಸೂಚಿಸಿದ್ದಾರೆ.

Advertisement

ಉತ್ತರಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌, ಇತರ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ಪ್ರಧಾನಿ ಹಲವು ಸಲಹೆಗಳನ್ನು ನೀಡಿದರು. ಸುತ್ತ ಮುತ್ತಲಿನ ಪರಿಸರಕ್ಕೆ ಹೊಂದಿಕೆ ಆಗುವ ರೀತಿಯಲ್ಲಿ ತೀರ್ಥಕ್ಷೇತ್ರ ವಿನ್ಯಾಸಕ್ಕೆ ಸೂಚಿಸಿದರು. “ಯಾತ್ರಾರ್ಥಿಗಳಿಗೆ, ಪ್ರವಾಸಿಗರಿಗೆ ಅನುಕೂಲವಾಗುವಂತೆ ಕೇದಾರನಾಥದ ಪುನರ್‌ನಿರ್ಮಾಣಕ್ಕೆ ಒತ್ತು ನೀಡಲಾಗಿದೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. 2013ರ ಮಹಾ ಮೇಘಸ್ಫೋಟ ಪ್ರವಾಹಕ್ಕೆ ತುತ್ತಾಗಿದ್ದ ಈ ಕ್ಷೇತ್ರಗಳ ಪುನರ್ನಿರ್ಮಾಣ ಕಾರ್ಯಕ್ಕೆ 2017ರಲ್ಲಿ ಪ್ರಧಾನಿ ಮೋದಿಯವರೇ ಚಾಲನೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next