Advertisement

PM Modi ರಾಜ್ಯದಲ್ಲಿ 7 ದಿನಗಳ ಮಿಂಚಿನ ಸಂಚಲನದ ಹೈಲೈಟ್ಸ್ ಇಲ್ಲಿದೆ

04:13 PM May 08, 2023 | Team Udayavani |

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಏಳು ದಿನಗಳ ಕಾಲ ಭರ್ಜರಿ ಪ್ರಚಾರ ಕೈಗೊಂಡು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಮಿಂಚಿನ ಸಂಚಲನ ಮೂಡಿಸಿದ್ದಾರೆ. ಏಳು ದಿನಗಳಲ್ಲಿ ಪ್ರಧಾನಿ ಸುಮಾರು 3,000 ಜನರನ್ನು ಭೇಟಿಯಾಗಿದ್ದಾರೆ.ಲಕ್ಷಾಂತರ ಮಂದಿ ಅವರನ್ನು ಪ್ರತ್ಯಕ್ಷವಾಗಿ ನೋಡಿ ಸಂಭ್ರಮಿಸಿದ್ದಾರೆ.

Advertisement

ಪಕ್ಷದ ಪ್ರಮುಖ ನಾಯಕರು, ಉನ್ನತ ಸಾಧಕರು, ಕಾರ್ಯಕರ್ತರು, ಸೂಡಾನ್ ನಿಂದ ಮರಳಿದ ಹಕ್ಕಿ ಪಿಕ್ಕಿ ಜನಾಂಗದವರು, ಕಲಾವಿದರು ಸೇರಿ ಹಲವು ಮಂದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಏಳು ದಿನಗಳ ಸಾರ್ವಜನಿಕ ಸಭೆಗಳು ಮತ್ತು ರೋಡ್‌ಶೋಗಳಲ್ಲಿ ಪಕ್ಷದ ಹಿರಿಯ ಮತ್ತು ಯುವ ಕಾರ್ಯಕರ್ತರು, ಪ್ರಮುಖ ನಾಗರಿಕರೊಂದಿಗೆ ಭೇಟಿಯಾಗಿದ್ದಾರೆ.

ಪ್ರಚಾರದ ಕೊನೆಯ ದಿನವಾದ ಭಾನುವಾರ ಪ್ರಧಾನಿ ಸುಮಾರು 430 ಜನರನ್ನು ಭೇಟಿಯಾದರು. ಶನಿವಾರ ಸುಮಾರು 450 ಜನರೊಂದಿಗೆ ಸಂವಾದ ನಡೆಸಿದರು ಎಂದು ಮೂಲಗಳು ತಿಳಿಸಿವೆ. ರ‍್ಯಾಲಿಗಳು ಮತ್ತು ಫ್ಲೈಟ್ ಟ್ರಿಪ್‌ಗಳ ಮೊದಲು ಮತ್ತು ನಂತರ ಜನರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ, ಅವರು ಮೇ 5 ರಂದು 300 ಕ್ಕೂ ಹೆಚ್ಚು ಜನರೊಂದಿಗೆ ಮಾತನಾಡಿದ್ದಾರೆ.

ಒಟ್ಟಾರೆಯಾಗಿ, ಮೋದಿ ಅವರು ರಾಜ್ಯದಲ್ಲಿ 18 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಏಪ್ರಿಲ್ 27 ರಂದು ವರ್ಚುವಲ್ ಸಂವಾದದ ಮೂಲಕ ಪಕ್ಷದ ಸದಸ್ಯರೊಂದಿಗೆ ಮಾತನಾಡಿದ್ದರು. ಆರು ರೋಡ್‌ಶೋಗಳನ್ನು ನಡೆಸಿದ್ದು, ಬೆಂಗಳೂರಿನಲ್ಲಿ ಮೂರು ಮತ್ತು ಮೈಸೂರು, ಕಲಬುರಗಿ ಮತ್ತು ತುಮಕೂರಿನಲ್ಲಿ ತಲಾ ಒಂದು ಭರ್ಜರಿ ರೋಡ್‌ಶೋ ನಡೆಸಿದ್ದಾರೆ.

Advertisement

ಪಕ್ಷದ ಕಾರ್ಯಕರ್ತರು, ವೃತ್ತಿಪರರು ಮತ್ತು ನಗರದ ಪ್ರಮುಖ ನಾಗರಿಕರ ಸಹಯೋಗವನ್ನು ಖಚಿತಪಡಿಸಿಕೊಳ್ಳಲು ಪ್ರಚಾರದ ಸಮಯದಲ್ಲಿ ಅವರೆಲ್ಲರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ತಮ್ಮ ಸಂವಾದದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರನ್ನೂ ಭೇಟಿಯಾಗಿದ್ದರು.

ಈ ಸಂವಾದಗಳು ಸಾಕಷ್ಟು ವೈಯಕ್ತಿಕವಾಗಿವೆ. ಪಕ್ಷದ ಸದಸ್ಯರೊಂದಿಗೆ ಅವರ ಸಂಭಾಷಣೆಯೂ ಬಹಳ ಮಹತ್ವದ್ದಾಗಿದೆ. ಅವರೊಂದಿಗಿನ ಹಿಂದಿನ ಸಂವಹನಗಳ ಬಗ್ಗೆ ಬಹಳಷ್ಟು ಜನರು ನೆನಪಿಸಿಕೊಂಡಿದ್ದಾರೆ. ಅನುಭವಿ ಕಾರ್ಯಕರ್ತರು ಮೋದಿಯವರೊಂದಿಗೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು, ಇದು ಪಕ್ಷದೊಂದಿಗಿನ ಅವರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.ಜನರು ಪ್ರಧಾನ ಮಂತ್ರಿಯನ್ನು ವೈಯಕ್ತಿಕವಾಗಿ ಭೇಟಿಯಾಗಿರುವ ಫೋಟೋಗಳು ವೈರಲ್ ಆಗುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next