Advertisement

ಪಿಎಂ-ಕಿಸಾನ್‌ ಯೋಜನೆ : ದೇಶದ 42 ಲಕ್ಷ ರೈತರಿಗೆ 3 ಸಾವಿರ ಕೋಟಿ ರೂ. ನೀಡಿಕೆ

09:28 PM Jul 20, 2021 | Team Udayavani |

ನವ ದೆಹಲಿ: ಪಿಎಂ-ಕಿಸಾನ್‌ ಯೋಜನೆಯಡಿ ದೇಶದ 42 ಲಕ್ಷ ರೈತರಿಗೆ 3 ಸಾವಿರ ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್‌ಗೆ ತಿಳಿಸಿದೆ. ಅಸ್ಸಾಂನಲ್ಲಿ 8.35 ಲಕ್ಷ, ತಮಿಳುನಾಡಿನಲ್ಲಿ 7.22 ಲಕ್ಷ, ಪಂಜಾಬ್‌ನಲ್ಲಿ 5.62 ಲಕ್ಷ, ಮಹಾರಾಷ್ಟ್ರದಲ್ಲಿ 4.45 ಲಕ್ಷ, ಉತ್ತರ ಪ್ರದೇಶದಲ್ಲಿ 2.65 ಲಕ್ಷ ರೈತರಿಗೆ ಯೋಜನೆಯಿಂದ ಪ್ರಯೋಜನವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

Advertisement

ನಗರ ಪ್ರದೇಶದ ನಿರುದ್ಯೋಗ ಶೇ.21
ನವ ದೆಹಲಿ: ನಗರ ಪ್ರದೇಶದಲ್ಲಿನ ನಿರುದ್ಯೋಗ ಪ್ರಮಾಣ ಶೇ.20.8 ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಂಸತ್‌ಗೆ ಈ ಮಾಹಿತಿ ನೀಡಿದ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್‌ ಈ ಮಾಹಿತಿ 2020ರ ಏಪ್ರಿಲ್‌-ಜೂನ್‌ಗೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ. ನಿರುದ್ಯೋಗ ಪ್ರಮಾಣ ಎಷ್ಟಾಗಿದೆ ಎಂಬ ಬಗ್ಗೆ ಪೂರ್ಣ ಪ್ರಮಾಣದ ಸಮೀಕ್ಷೆಯ ವರದಿ ಬಂದ ಬಳಿಕವೇ ನಿರ್ಧರಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :ಕೊಡವ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ: ಅಧ್ಯಯನದ ಮಾನದಂಡ ಪರಿಶೀಲಿಸಲು ಹೈಕೋರ್ಟ್‌ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next