Advertisement

Rail ಹಳಿ ತಪ್ಪಿಸಲು ಸಂಚು ಶಂಕೆ: ಎನ್‌ಐಎ ತನಿಖೆ

02:06 AM Oct 26, 2024 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ನಡೆದ ರೈಲು ಹಳಿ ತಪ್ಪಿದ ದುರಂತ ಪ್ರಕರಣಗಳು ವಿಧ್ವಂಸಕ ಕೃತ್ಯ ಇರಬಹುದೇ ಎಂಬುದರ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಾಥಮಿಕ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇತ್ತೀಚಿನ 4 ರೈಲು ಅಪಘಾತ ಮತ್ತು ಹಳಿ ತಪ್ಪಿದ ಘಟನೆಗಳನ್ನು ಎನ್‌ಐಎ ತನಿಖೆಗೆ ಆರಿಸಿಕೊಂಡಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸಂಚು ನಡೆದಿರುವ ಮಾಹಿತಿ ಲಭ್ಯವಾಗಿಲ್ಲ. ಗ್ಯಾಸ್‌ ಸಿಲಿಂಡರ್‌, ಸಿಮೆಂಟ್‌ ಇಟ್ಟಿಗೆಗಳನ್ನು ರೈಲು ಹಳಿಯ ಮೇಲಿಟ್ಟು ಹಳಿ ತಪ್ಪಿಸಲು ಯತ್ನಿಸಿದ ಘಟನೆಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅ.9ರಂದು ಉತ್ತರ ಪ್ರದೇಶದಲ್ಲಿ ಗೂಡ್ಸ್‌ ರೈಲೊಂದು ಸಿಮೆಂಟ್‌ ಬ್ಲಾಕ್‌ಗೆ ಗುದ್ದಿ ಅಪಘಾತಕ್ಕೀಡಾಗಿತ್ತು. ಸೆ.22ರಂದು ರೈಲು ಹಳಿಯ ಮೇಲೆ ಖಾಲಿ ಗ್ಯಾಸ್‌ ಸಿಲಿಂಡರ್‌ ಗಮನಿಸಿದ ಲೋಕೋ ಪೈಲಟ್‌ ರೈಲು ನಿಲ್ಲಿಸಿ ಅಪಾಯ ತಪ್ಪಿಸಿದ್ದರು. ಕಾಳಿಂದಿ ಎಕ್ಸ್‌ ಪ್ರಸ್‌ ರೈಲನ್ನೂ ಸಿಲಿಂಡರ್‌ ಇಟ್ಟು ಹಳಿ ತಪ್ಪಿಸುವ ಯತ್ನ ಸೆ.8ರಂದು ನಡೆದಿತ್ತು. ಬೆಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟದ ರೂವಾರಿ ಉಗ್ರರ ಸ್ಲಿàಪರ್‌ಸೆಲ್‌ಗೆ ರೈಲು ಹಳಿ ತಪ್ಪಿಸಲು ಕರೆ ನೀಡಿದ ಬಳಿಕ ಘಟನೆಗಳು ಹೆಚ್ಚಿವೆ.

Advertisement

Udayavani is now on Telegram. Click here to join our channel and stay updated with the latest news.

Next