Advertisement

ದಯವಿಟ್ಟು ಬಾಯ್ಕಾಟ್ ಬಾಲಿವುಡ್ ನಿಲ್ಲಿಸಿ; ಸಿಎಂ ಯೋಗಿ ಬಳಿ ನಟ ಸುನೀಲ್ ಶೆಟ್ಟಿ ಮನವಿ

08:04 PM Jan 05, 2023 | Team Udayavani |

ನವದೆಹಲಿ: ಬಾಲಿವುಡ್ ಬಹಿಷ್ಕಾರದ ಪ್ರವೃತ್ತಿಯನ್ನು ನಿಲ್ಲಿಸುವಂತೆ ಗುರುವಾರ  ನಟ ಸುನೀಲ್ ಶೆಟ್ಟಿ  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ ಮತ್ತು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡುವಂತೆ ಕೇಳಿಕೊಂಡಿದ್ದಾರೆ.

Advertisement

“ದಯವಿಟ್ಟು ಬಾಯ್ಕಾಟ್ ಬಾಲಿವುಡ್ ನಿಲ್ಲಿಸಿ. ನೀವು ಅದನ್ನು ನಿಲ್ಲಿಸಬಹುದು. ಟ್ವಿಟರ್‌ನಲ್ಲಿನ ಟ್ರೆಂಡ್‌ಗಳನ್ನು ನಿಲ್ಲಿಸಬಹುದು.ನಮ್ಮ ಸಂಗೀತ ಮತ್ತು ಕಲೆ ಮೂಲಕ ಭಾರತವನ್ನು ಜಗತ್ತಿನಲ್ಲಿ ಹೆಮ್ಮೆ ಪಡುವಂತೆ ಮಾಡಿದೆವು.  ನೀವು ಪ್ರಧಾನಿಯವರೊಂದಿಗೆ ಮಾತನಾಡಿದರೆ ಅದು ಸಹಾಯಕವಾಗುತ್ತದೆ” ಎಂದು ಅವರು ಹೇಳಿದರು.

#ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಹೆಚ್ಚುತ್ತಿರುವ ಮಧ್ಯೆ ಟ್ವಿಟರ್ ಬಳಕೆದಾರರು ಬಾಲಿವುಡ್ ಚಲನಚಿತ್ರಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸುತ್ತಿರುವ ನಡುವೆ ನಟರಿಂದ ಈ ವಿನಂತಿಯು ಬಂದಿದೆ. ವಿಶೇಷವಾಗಿ 2020 ರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಗಲುವಿಕೆಯ ನಂತರ ಈ ಪ್ರವೃತ್ತಿಯು ವೇಗವನ್ನು ಪಡೆದುಕೊಂಡಿತು. ‘ಲಾಲ್ ಸಿಂಗ್ ಚಡ್ಡಾ’, ‘ರಕ್ಷಾ ಬಂಧನ’, ‘ಬ್ರಹ್ಮಾಸ್ತ್ರ’ ಸೇರಿದಂತೆ ದೊಡ್ಡ ಚಲನಚಿತ್ರಗಳು ಪರಿಣಾಮಗಳನ್ನು ಎದುರಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next