Advertisement

ತ್ರಿವಳಿ ತಲಾಖ್‌: ಹೊಸ ಅರ್ಜಿ

06:22 PM Sep 26, 2018 | Team Udayavani |

ಹೊಸದಿಲ್ಲಿ: ಒಂದೇ ಬಾರಿಗೆ ತ್ರಿವಳಿ ತಲಾಖ್‌ ಹೇಳುವ ಪದ್ಧತಿಯನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿ ಇತ್ತೀಚೆಗೆ ಹೊರಡಿಸಲಾದ ಸುಗ್ರೀವಾಜ್ಞೆಯ ನಿಬಂಧನೆಗಳ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಕೇರಳ ಮೂಲದ ಮುಸ್ಲಿಂ ಸಂಸ್ಥೆಯಾದ ಸಮಸ್ತ ಕೇರಳ ಜಮೀಯ್ಯತುಲ್‌ ಉಲಮಾ ಈ ಅರ್ಜಿ ಸಲ್ಲಿಸಿದೆ. ಕೇಂದ್ರ ಸರಕಾರದ ಸುಗ್ರೀವಾಜ್ಞೆಯು ನಿರಂಕುಶ ಹಾಗೂ ತಾರತಮ್ಯದಿಂದ ಕೂಡಿದ್ದು, ಅದನ್ನು ವಜಾ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next