Advertisement

ಮಹಿಳೆಯರ ಸ್ವಾವಲಂಬನೆಗೆ ಯೋಜನೆ: ಸ್ವಾಮೀಜಿ

05:14 PM Nov 23, 2021 | Team Udayavani |

ಮಸ್ಕಿ: ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ಸಾಗಿಸುವುದಕ್ಕಾಗಿ ಸರಕಾರ ಹಲವು ಯೋಜನೆ ಜಾರಿ ಮಾಡಿದ್ದು, ಅವುಗಳ ಸದ್ಬಳಕೆಯಾಗಬೇಕು ಎಂದು ಗುಂಡಾ ಗ್ರಾಮಾದ ಶ್ರೀರಾಚೋಟಿ ಚೆನ್ನಮಲ್ಲಯ್ಯ ಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ಗುಂಡಾ ಗ್ರಾಮದ ಶ್ರೀ ಸ್ಫೂರ್ತಿ ಸಂಜೀವಿನಿ, ಗ್ರಾಪಂ ಒಕ್ಕೂಟ ವತಿಯಿಂದ ಗುಂಡಾ ಗ್ರಾಪಂ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಉನ್ನತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಹಿಂದೆ ಮಹಿಳೆಯರು ಪುರುಷರನ್ನು ಅವಲಂಬಿಸಿಯೇ ಜೀವನ ನಡೆಸಬೇಕು ಎನ್ನುವ ಕಾಲವೊಂದಿತ್ತು. ಆದರೆ, ಈಗ ಸುಧಾರಣೆಯಾಗಿದೆ. ಮಹಿಳೆಯರು ಕೂಡ ವಿದ್ಯಾವಂತರಾಗಿದ್ದು, ಎಲ್ಲ ರಂಗದಲ್ಲೂ ಮುಂದುವರಿದಿದ್ದಾರೆ ಎಂದರು.

ಶ್ರೀಸ್ಫೂರ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ ಮಾತನಾಡಿದರು. ಗುಂಡಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಕಣ್ಣೂರು, ಯೋಜನೆಯ ವಲಯ ಮೇಲ್ವಿಚಾರಕ ಪ್ರಕಾಶ, ತರಬೇತುದಾರ ಗಿರಿಜಾ, ಅಜಯ್‌ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next