Advertisement

ಬೀದಿನಾಯಿ ಚಿಕಿತ್ಸೆಗೆ ದಿಲ್ಲಿಯಿಂದ ಫೋನ್‌!

12:35 PM Jan 11, 2018 | Team Udayavani |

ಬೆಳ್ತಂಗಡಿ: ಹಳ್ಳಿ ಬೀದಿಯಲ್ಲಿ ಅನಾರೋಗ್ಯಕ್ಕೀಡಾಗಿ ಒದ್ದಾಡುತ್ತ ಬೀದಿನಾಯಿಯೊಂದರ ಚಿಕಿತ್ಸೆಗಾಗಿ
ರಾಜಧಾನಿ ದಿಲ್ಲಿಯಿಂದ ಬಂದ ಫೋನ್‌ ಕರೆ ಬಂದು ಚಿಕಿತ್ಸೆ ನೀಡಿದ ಘಟನೆ ಕುತೂಹಲಕ್ಕೆ ಕಾರಣವಾಗಿದೆ.

Advertisement

ಧರ್ಮಸ್ಥಳದ ವೈಶಾಲಿ ವಸತಿಗೃಹದ ಬಳಿ ಬುಧವಾರ ಅಪರಾಹ್ನ ಬೀದಿನಾಯಿಯೊಂದು ಅನಾರೋಗ್ಯ ದಿಂದ ಬಳಲಿ ನರಳುತ್ತಿತ್ತು. ಇದನ್ನು ಕಂಡ ಯಾತ್ರಿಕರೊಬ್ಬರು ದಿಲ್ಲಿಯ ಪ್ರಾಣಿದಯಾ ಸಂಘಕ್ಕೆ ವಾಟ್ಸ್‌ಆ್ಯಪ್‌ ಮೂಲಕ ಚಿತ್ರ ಸಹಿತ ಮಾಹಿತಿ ನೀಡಿದರು. ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಅವರು ಜಿಲ್ಲಾಡಳಿತವನ್ನು ಸಂಪರ್ಕಿಸಿ,
ತತ್‌ಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ನಾಯಿಯಿದ್ದ ಸ್ಥಳಕ್ಕೆ ತೆರಳಿದ ಪಶುಸಂಗೋಪನಾ
ಇಲಾಖೆಯ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆ ನೀಡಿ ನಾಯಿಯನ್ನು ಆ್ಯಂಬುಲೆನ್ಸ್‌ ಮೂಲಕ ಮಂಗಳೂರಿಗೆ
ಕಳುಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next