Advertisement

ಗ್ರಾಮೀಣ ಕೈಮಗ್ಗ ವಸ್ತುಗಳ ಪ್ರದರ್ಶನ

12:49 PM Mar 21, 2017 | |

ಬೆಂಗಳೂರು: ವಿದೇಶಿ ಉತ್ಪನ್ನಗಳ ವ್ಯಾಮೋಹ ಬಿಟ್ಟು ದೇಸಿ ಕಲಾವಿದರಿಂದ ತಯಾರಾದ ಸ್ವದೇಶಿ ಉತ್ಪನ್ನಗಳನ್ನು ಕೊಳ್ಳಲು ಜನ ಮನಸ್ಸು ಮಾಡಬೇಕೆಂದು ನಟಿ ಸುಧಾರಾಣಿ ಹೇಳಿದ್ದಾರೆ.

Advertisement

ನಗರದ ಗ್ರಾಮೀಣ ಕರಕುಶಲ ಉದ್ಯಮ “ಗ್ರಾಮೀಣ ಅಂಗಡಿ’ ಶಾಖೆ ಆಯೋಜಿಸಿದ್ದ “ನಮ್ಮ ಯುಗಾದಿಗೆ ನಮ್ಮೂರ ಕೈಮಗ್ಗದ ವಸ್ತ್ರಾಭರಣಗಳು’ ಪ್ರದರ್ಶನ ಮೇಳ ಉದ್ಘಾಟಿಸಿ ಮಾತಾನಾಡಿದ ಅವರು, ಉತ್ತರ ಕರ್ನಾಟಕ ಜಿಲ್ಲೆಗಳ ದೇಸಿ ಸೊಗಡಿನ ಕೈಮಗ್ಗದ ಸೀರೆಗಳು ಯುಗಾದಿ ಹಬ್ಬಕ್ಕೆ ವಿಶೇಷ ಮೆರಗನ್ನು ನೀಡುತ್ತವೆ. ಕೈಮಗ್ಗ ಮತ್ತು ಖಾದಿ, ಗ್ರಾಮೋದ್ಯೋಗ ವಸ್ತುಗಳನ್ನು ಖರೀದಿಸಿ ಸ್ವದೇಶಿ ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಗ್ರಾಮೀಣ ಕರಕುಶಲ ಉದ್ಯಮದ ಸಂಸ್ಥಾಪಕ ಸದಸ್ಯ ಬಿ.ರಾಜಶೇಖರಮೂರ್ತಿ ಮಾತಾ ನಾಡಿ, ಗ್ರಾಮೀಣ ಅಂಗಡಿಯಲ್ಲಿ ಹತ್ತಿ ಸೀರೆಗಳು, ರೇಷ್ಮೆ ಮತ್ತು ಹತ್ತಿ ಮಿಶ್ರಿತ ಸೀರೆಗಳು, ಇಳಕಲ್‌ ಕೈಮಗ್ಗ ಸೀರೆಗಳು, ಸೆಣಬಿನ (ನಾರಿನ) ಸೀರೆಗಳು ಮತ್ತು ಖಾದಿ ಜುಬ್ಟಾಗಳು ಲಭ್ಯವಿದೆ. ಶೇ.10 ರಿಂದ 30 ರವರೆಗೆ ರಿಯಾಯತಿ ಇರುತ್ತದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next