Advertisement

ಮೆಣಸಿನಕಾಯಿ ಬೆಳೆಗೆ ಮುರುಟು ರೋಗ ಬಾಧೆ

12:24 PM Dec 13, 2021 | Team Udayavani |

ರಾಣಿಬೆನ್ನೂರ: ತಾಲೂಕಿನ ಹನುಮನಮಟ್ಟಿಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಜಿಲ್ಲೆಯ ಕೋಣನತಂಬಗಿ ಗ್ರಾಮದ ಪ್ರಗತಿಪರ ರೈತ ಬೀರಪ್ಪಭರಮಪ್ಪ ರಿತ್ತಿಕುರಬರ ಅವರ ಮೆಣಸಿನಕಾಯಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆಗಳು ಹೆಚ್ಚಾಗಿವೆ. ಈ ರೋಗಗಳಲ್ಲಿ ಮುರುಟುರೋಗ ಪ್ರಮುಖವಾಗಿದ್ದು, ಇದರಿಂದ ಇಳುವರಿಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಲಿದೆ.ರೈತರು ಈ ರೋಗಕ್ಕೆ ಪರಿಹಾರ ಕಾಣದ ಮೆಣಸಿನಕಾಯಿ ಬೆಳೆಯುವುದನ್ನು ತ್ಯಜಿಸಿ ಇತರ ಬೆಳೆಗಳನ್ನು ಬೆಳೆಯಲು ಆಸಕ್ತಿ ವಹಿಸುತ್ತಿದ್ದಾರೆ ಎಂದರು.

ಈ ರೋಗ ರಸ ಹೀರುವ ಕೀಟಗಳಾದ ಥ್ರಿಪ್ಸ್‌ ಕೀಟ ಹಾಗೂ ಮೈಟ್‌ ನುಸಿಯಿಂದ ಹರಡುತ್ತದೆ.ಥ್ರಿಪ್ಸ್‌ ರಸ ಹೀರುವ ಕೀಟ ನೋಡಲು ತಿಳಿ ಹಸಿರು ಬಣ್ಣದಾಗಿದ್ದು, ಅತೀ ಚಿಕ್ಕದಾಗಿರುತ್ತದೆ. ಈ ಕೀಟದರಸ ಹೀರುವಿಕೆಯಿಂದ ಎಲೆಗಳ ಅಂಚಿನಿಂದ ಒಳಮುದುರಿಕೊಳ್ಳುತ್ತವೆ. ಇದಕ್ಕೆ ಒಳಮುಟುರುರೋಗವೆಂದು ಕರೆಯುತ್ತಾರೆ. ಈ ಥ್ರಿಪ್ಸ್‌ ಕೀಟರಸ ಹೀರುವುದಲ್ಲದೆ ಹಲವಾರು ವಿವಿಧ ಬಗೆಯವೈರಸ್‌ (ನಂಜಾಣು)ಗಳನ್ನು ಎಲೆಗಳಲ್ಲಿ ಹರಡುತ್ತದೆ. ಹಲವಾರು ಬಗೆಯ ವೈರಸ್‌ಗಳಲ್ಲಿ ಟಾನ್ಪೊವೈರಸ್‌ ಪ್ರಮುಖವಾಗಿದೆ. ಇದರಿಂದಾಗಿ ಎಲೆಗಳಮಧ್ಯಭಾಗಗಳಲ್ಲಿ ತಗ್ಗುಗಳು ಕಾಣಿಸಿಕೊಳ್ಳುತ್ತವೆ. ಈಕೀಟದ ಹಾವಳಿ ಹಾಗೂ ವೈರಸ್‌ ಬಾಧೆ ತೀವ್ರವಾದಾಗಎಲೆಗಳು ಗಾತ್ರದಲ್ಲಿ ಅತೀ ಚಿಕ್ಕದಾಗಿ ಹಳದಿ ಬಣ್ಣಕ್ಕೆ ತಿರುಗಿ ಹೂ ಹಾಗೂ ಹಣ್ಣುಗಳನ್ನು ಬಿಡದೆ ಕುಬ್ಜವಾಗುತ್ತವೆ ಎಂದರು.

ಇದರಿಂದ ಇಳುವರಿ ಗಣನೀಯವಾಗಿ ಕುಂಠಿತವಾಗುತ್ತದೆ. ಮುಟುರು ರೋಗಕ್ಕೆ ನಾಂದಿಯಾದಇನ್ನೊಂದು ಮುಖ್ಯ ಕೀಟವಂದರೆ ಮೈಟ್‌ ನುಸಿ. ಇದು ತಿಳಿ ಹಸಿರು ಹಾಗೂ ಬಿಳಿ ಬಣ್ಣದಾಗಿದ್ದು, ಎಲೆಗಳಕೆಳಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತದೆ.ಇವುಗಳ ರಸ ಹೀರುವಿಕೆಯಿಂದ ಎಲೆಗಳು ಅಂಚಿನಿಂದ ಹೊರ ಮಗ್ಗುಲಿಗೆ ಮುದುರಿಕೊಳ್ಳುತ್ತವೆ. ಅವುಗಳದೇಟು ಉದ್ದವಾಗಿರುತ್ತವೆ. ಇದಕ್ಕೆ ಹೊರ ಮುಟುರುರೋಗವೆಂದು ಕರೆಯುತ್ತಾರೆ. ಈ ಎರಡು ಬಗೆಯಮುಟುರು ರೋಗಗಳು ಏಕಕಾಲದಲ್ಲಿ ತೀವ್ರತರಕಾಣಿಸಿಕೊಂಡು, ಇವುಗಳ ಹತೋಟಿಗಾಗಿ ವಿವಿಧಬಗೆಯ ಕೀಟನಾಶಕಗಳನ್ನು ಸಿಂಪಡಣೆ ಮಾಡಿದರೂ ಹತೋಟಿಗೆ ಬರುವುದು ಕಷ್ಟ. ಈ ಮುಟುರು ರೋಗದನಿಯಂತ್ರಣಕ್ಕಾಗಿ ಸಮಗ್ರ ಕೀಟ ನಿರ್ವಹಣೆ ಅಂಶ ಅತೀ ಅವಶ್ಯಕವಾಗಿದೆ. ಈ ದಿಸೆಯಲ್ಲಿ ಬ್ಯಾರಿಯರ್‌(ತಡೆ) ಬೆಳೆ ಒಂದು ಅತ್ಯುತ್ತಮ ಮುಟುರು ರೋಗ ನಿರ್ವಹಣಾ ಪದ್ಧತಿಯಾಗಿ ಪರಿಣಮಿಸಿದೆ ಎಂದರು.

ತಡೆ ಬೆಳೆ ಬೆಳೆಯುವ ವಿಧಾನವೆಂದರೆ, ಈ ತಡೆಬೆಳೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಮೆಣಸಿನಸಸಿ ನಾಟಿ ಮಾಡುವ 10-15 ದಿನಗಳ ಪೂರ್ವದಲ್ಲಿಕೂರಿಗೆಯಿಂದ ಬಿತ್ತನೆ ಮಾಡಬೇಕು ಹಾಗೂ ತಡೆ ಬೆಳೆಗಳನ್ನು ತುಂಬಾ ಅಡುವಾಗಿ (ಶಿಫಾರಿತ ಬೀಜಪ್ರಮಾಣಕ್ಕಿಂತ ಶೇ. 25 ಜಾಸ್ತಿ) ಬಿತ್ತನೆ ಮಾಡಬೇಕು.ಪ್ರತಿ 40-50 ಸಾಲು (24 ಮೀ. ಅಥವಾ 38 ಮೀ.) ಅಂತರದಲ್ಲಿ ಮೆಣಸಿನ ಕುಣಿಗಳ ಮಧ್ಯದಲ್ಲಿ 6 ಆಥವಾ 9 ಸಾಲುಗಳಂತೆ ಬಿತ್ತನೆ ಮಾಡಬೇಕು. ಬಿತ್ತನೆ ಮಾಡುವಾಗ ಸಾಲುಗಳು ಉತ್ತರ-ದಕ್ಷಿಣವಾಗಿ ಇರುವಂತೆ ಬಿತ್ತನೆ ಮಾಡಬೇಕು. ಈ ರೀತಿ ಬಿತ್ತುವು ದರಿಂದ ಪಶ್ಚಿಮದಿಂದ-ಪೂರ್ವಕ್ಕೆ (ಮುಂಗಾರು ಸಮಯದ ಗಾಳಿ) ಹಾಗೂ ಪೂರ್ವದಿಂದ-ಪಶ್ಚಿಮಕ್ಕೆ (ಮೂಡುಗಾಳಿ)ಬೀಸುವ ಗಾಳಿಗೆ ಈ ಬೆಳೆ ತಡೆಯಾಗಿ ಪರಿಣಮಿಸುತ್ತದೆ. ವೈರಸ್‌ ನಂಜಾಣು ಮುಖ್ಯವಾಗಿ ಬೀಸುವ ಗಾಳಿಯಿಂದ (ಥ್ರಿಪ್ಸ್‌ ಹಾಗೂ ಮೈಟ್‌ ಮೂಲಕ ಮೆಣಸಿನ ಸಸಿಗಳಿಂದ ಸಸಿಗಳಿಗೆ ಪಸರಿಸುತ್ತದೆ. ಈ ತಡೆ ಬೆಳೆ ಮುಖ್ಯವಾಗಿ ಥ್ರಿಪ್ಸ್‌ ಹಾಗೂ ಮೈಟ್ಸ್‌ ಚಲನೆಗೆ ಅಡ್ಡಿಯಾಗಿ ವೈರಸ್‌ ಪಸರಿಸುವುದನ್ನು ಕಡಿಮೆಗೊಳಿಸುತ್ತದೆ. ಗೋವಿನ ಜೋಳವನ್ನು ತಡೆ ಬೆಳೆಯಾಗಿ ಬೆಳೆದಾಗ ಹಲವಾರುನೈಸರ್ಗಿಕ ಪರೋಪಕಾರಿ ಜೀವಿಗಳಾದ ಜೇಡ, ಗುಲ ಗುಂಜಿ ಹುಳಗಳ ಸಂಖ್ಯೆ ಅಧಿಕವಾಗುತ್ತವೆ. ಇದೇ ರೀತಿ,ಜೋಳವನ್ನು ತಡೆ ಬೆಳೆಯಾಗಿ ಬೆಳೆದಾಗ ಜೇಡಗಳ ಸಂಖ್ಯೆ ಅಧಕವಾಗುತ್ತದೆ. ಇದರಿಂದಾಗಿ ಸಹಜವಾಗಿಯೇ ಮುಟುರು ರೋಗ ಕಡಿಮೆಯಾಗುತ್ತದೆ. ಈ ರೀತಿ ತಡೆ ಬೆಳೆ ಬೆಳೆಯುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಮುಟುರು ರೋಗ ನಿಯಂತ್ರಣ ಸಾಧ್ಯವಿದೆ ಎಂದರು.

Advertisement

ಈ ಸಂದರ್ಭದಲ್ಲಿ ಕೇಂದ್ರದ ಮಣ್ಣು ವಿಜ್ಞಾನಿ ಡಾ|ರಾಜಕುಮಾರ ಜಿ.ಆರ್‌., ಗ್ರಾಮದ ಪ್ರಗತಿ ಪರ ರೈತರಾದ ಮಂಜಪ್ಪ ಉಜ್ಜಣ್ಣನವರ, ಶಿವಪ್ಪ ಸಿದ್ಧಪ್ಪ ರಿತ್ತಿಕುರುಬರ ಮತ್ತು ದ್ಯಾಮನಗೌಡ ಹಿರೇಗೌಡ್ರು ಇತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next