Advertisement

BJPಯದ್ದು ಬಲಿಷ್ಠ ಸುಳ್ಳು ಎಂಬುದು ಮಾತ್ರ ಜನತೆಗೆ ಅರ್ಥವಾಗಿದೆ: ಖರ್ಗೆ

01:31 AM Jan 01, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶವಾಸಿಗಳಿಗೆ ನೀಡಿದ ಭರವಸೆಗಳು ಯಾವುದೂ ಈಡೇರಲೇ ಇಲ್ಲ. ಆದರೆ, ಬಿಜೆಪಿಯದ್ದು ಅತಿದೊಡ್ಡ ಸುಳ್ಳುಗಳು ಎಂಬುದು ಮಾತ್ರ ಜನತೆಗೆ ಅರ್ಥವಾಗಿದೆ. ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಎಕ್ಸ್‌ನಲ್ಲಿ ಈ ಬಗ್ಗೆ ಖರ್ಗೆ ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ “ನರೇಂದ್ರ ಮೋದಿ ಅವರೇ, 2023ರ ಕಡೆಯ ದಿನ ಬಂದಾಗಿದೆ! ನೀವು 2022ರ ವೇಳೆಗೆ ದೇಶದ ರೈತರ ಆದಾಯ ದ್ವಿಗುಣಗೊಳ್ಳುತ್ತದೆ, ಭಾರತದ ಪ್ರತೀ ಮನೆಗೂ ದಿನದ 24 ಗಂಟೆ ಯೂ ವಿದ್ಯುತ್‌ ಲಭ್ಯವಾಗಲಿದೆ ಮತ್ತು ದೇಶದ ಆರ್ಥಿಕತೆ 5 ಲಕ್ಷ ಕೋಟಿ ಡಾಲರ್‌ಗೆ ತಲುಪಲಿದೆ ಎಂದಿದ್ದೀರಿ! ಇದ್ಯಾವುದೂ ಸಾಧ್ಯವಾಗಲೇ ಇಲ್ಲ. ಆದರೆ ಸುಳ್ಳಿನಲ್ಲಿ ಬಿಜೆಪಿಯದ್ದೇ ಅತೀದೊಡ್ಡ ಸುಳ್ಳು ಎಂಬುದು ಜನಕ್ಕೆ ಅರ್ಥವಾಗಿದೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next