Advertisement

ಸರ್ಕಾರ, ಜನರ ನಿರ್ಲಕ್ಷ್ಯವೇ ಇಂದಿನ ಕೋವಿಡ್ ಪರಿಸ್ಥಿತಿಗೆ ಕಾರಣ : ಮೋಹನ್ ಭಾಗವತ್

08:42 AM May 16, 2021 | Team Udayavani |

ನವದೆಹಲಿ: ಕೋವಿಡ್ ಸೋಂಕಿನ ತೀವ್ರತೆಗೆ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ದೇಶದ ಸದ್ಯದ ಸ್ಥಿತಿಗೆ ಎಲ್ಲಾ ವರ್ಗಗಳು ಕೋವಿಡ್ ಸೋಂಕನ್ನು ನಿರ್ಲಕ್ಷ್ಯ ಮಾಡಿರುವುದೇ ಕಾರಣ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

Advertisement

ಜನರು, ಸರ್ಕಾರ ಹಾಗೂ ಎಲ್ಲರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಆದರೆ ಇಂದು ಅವರು ಮೂರನೇ ಅಲೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಈ ಬಗ್ಗೆ ಹೆದರಿಕೊಳ್ಳಬೇಕೆ..? ಅಥವಾ ನಾವು ಅದನ್ನು ಧೈರ್ಯದಿಂದ ಎದುರಿಸಬೇಕೆ..? ಈಗ ನಾವು ಎದುರಿಸಿದ ಸಂದರ್ಭದಿಂದ ಪಾಠ ಕಲಿಯಬೇಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಜನರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಕೋವಿಡ್ ವಿರುದ್ಧ ಹೋರಾಡಿ ಜಯ ಪಡೆಯಬೇಕಿದೆ. ಇಂತಹ ಸಂದಿಗ್ಧ ಸಂದರ್ಭಗಳೇ ನಮ್ಮನ್ನು ಮುಂದಿನ ಭವಿಷ್ಯಕ್ಕೆ ಸಿದ್ಧಗೊಳಿಸುತ್ತದೆ. ಯಶಸ್ಸು ಇಲ್ಲಿ ಅಂತಿಮವಲ್ಲ, ಅದೇ ರೀತಿ ಸೋಲು ಕೂಡ ಕೊನೆಯಲ್ಲ. ಆತ್ಮಸ್ಥೈರ್ಯವೇ ಇಲ್ಲಿ ಪ್ರಮುಖವಾಗುತ್ತದೆ ಎಂದು ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next