Advertisement

ಬಸ್‌ಸ್ಟಾಂಡ್‌ನ‌ಲ್ಲಿ ಭಿಕ್ಷುಕನ ಚೀಲ!:ಬಾಂಬ್‌ ಎಂದು ವ್ಯಾಪಕ ಪರಿಶೀಲನೆ

03:31 PM Apr 16, 2017 | Team Udayavani |

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಸ್‌ಸ್ಟಾಂಡ್‌ನ‌ಲ್ಲಿ ಭಿಕ್ಷುಕನೊಬ್ಬ ಬಿಟ್ಟು ಹೋಗಿದ್ದ ಚೀಲ ಕಂಡು ಬಾಂಬ್‌ ಎಂದು ಬೆದರಿ ವ್ಯಾಪಕ ಪರಿಶೀಲನೆ ನಡೆಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. 

Advertisement

ಇಂದು ರಾತ್ರಿ 8 ಗಂಟೆಗೆ ಆರ್‌ಸಿಬಿ ಮತ್ತು ಪುಣೆ ತಂಡದ ನಡುವೆ ಐಪಿಎಲ್‌ ಹಣಾಹಣಿ ನಡೆಯಲಿದ್ದು ,ಭಾರೀ ಸಂಖ್ಯೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಹರಿದು ಬರುವ ಹಿನ್ನಲೆಯಲ್ಲಿ ಭದ್ರತೆ ಬಿಗಿ ಗೊಳಿಸಲಾಗಿತ್ತು. ಈ ವೇಳೆ ಬಸ್‌ಸ್ಟಾಂಡ್‌ನ‌ಲ್ಲಿದ್ದ ಪ್ಲಾಸ್ಟಿಕ್‌ ಚೀಲ ಆತಂಕಕ್ಕೆ ಕಾರಣವಾಯಿತು.

ಚೀಲವನ್ನು ಕಂಡು ಕೂಡಲೆ ಸ್ಥಳಕ್ಕೆ ಶ್ವಾನ ದಳ ದೊಂದಿಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಭಿಕ್ಷುಕನ ಹರಿದ ಬಟ್ಟೆಗಳಿದ್ದವು. ತೀವ್ರ ಆತಂಕಗೊಂಡಿದ್ದ ಜನರು ನಿಟ್ಟುಸಿರು ಬಿಟ್ಟರು. 

ರಾತ್ರಿ ಮಲಗಲು ಬಳಸುತ್ತಿದ್ದ ಬಟ್ಟೆಗಳನ್ನು ಭಿಕ್ಷುಕ ಚೀಲದಲ್ಲಿ ಹಾಕಿ  ಬಿಟ್ಟು ಹೋಗಿದ್ದ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next