Advertisement

ಬಯಲುಸೀಮೆ ಪ್ರದೇಶದಲ್ಲಿ ಸೀಗಡಿ ಕೃಷಿ ಮಾಡಿ ಸೈ ಎಣಿಸಿಕೊಂಡ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ

10:00 PM Nov 20, 2020 | mahesh |

ಚಿಕ್ಕಬಳ್ಳಾಪುರ: ರಾಜ್ಯದ ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೀಮಿತವಾಗಿದ್ದ ಸೀಗಡಿ ಕೃಷಿ ಇದೀಗ ಬಯಲುಸೀಮೆ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಎಂಬುವರು ಸಿಹಿನೀರಿನಲ್ಲಿ ಸೀಗಡಿ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

Advertisement

ಸಾಮಾನ್ಯವಾಗಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು,ಉತ್ತರ ಕರ್ನಾಟಕದ ಬಳ್ಳಾರಿ,ರಾಯಚೂರು ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶದ,ತಮಿಳುನಾಡು,ಮಹಾರಾಷ್ಟ್ರ ಪ್ರದೇಶದಲ್ಲಿ ಸೀಗಡಿ ಕೃಷಿ ಮಾಡುತ್ತಿದ್ದರು ಆದರೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದರಲ್ಲೂ ಸಿಹಿ ನೀರಿನಲ್ಲಿ ಸೀಗಡಿ ಕೃಷಿ ಮಾಡುವ ಮೂಲಕ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಸೈ ಎಣಿಸಿಕೊಂಡಿದ್ದಾರೆ ಕೇವಲ 90 ದಿನಗಳಲ್ಲಿ 5-6 ಲಕ್ಷ ರೂಗಳನ್ನು ಬಂಡವಾಳ ಹಾಕಿ ಇದೀಗ ಸುಮಾರು 8 ಲಕ್ಷ ರೂಗಳು ಆದಾಯಗಳಿಸಿ ಮಾದರಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಎಂದರೇ ನೆನಪಾಗುವುದು ಬರಪೀಡಿತ ಜಿಲ್ಲೆ ಎಂದು ಆದರೇ ಮಳೆಯ ನೀರನ್ನು ಆಶ್ರಯಿಸಿಕೊಂಡು ರೇಷ್ಮೆ,ತರಕಾರಿ,ಹಾಲು ಉತ್ಪಾದನೆಯಲ್ಲಿ ದೇಶ ವಿದೇಶದಲ್ಲಿ ಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿ ಇದೀಗ ಸೀಗಡಿ ಕೃಷಿ ಪಾದಾರ್ಪಣೆ ಮಾಡಿದ್ದು ಮುಂದಿನ ದಿನಗಳಲ್ಲಿ ಬರಪೀಡಿತ ತಾಲೂಕಿನ ಜನರ ಇದು ವರದಾನವಾಗಬಹುದೆಂದು ನಿರೀಕ್ಷಿಸಲಾಗಿದೆ.

ಮುಕ್ಕಾಲು ಎಕರೆ ಪ್ರದೇಶದಲ್ಲಿ 100 ಅಡಿ ಅಗಲ 300 ಅಡಿ ಉದ್ದ ಹೊಂಡವನ್ನು ನಿರ್ಮಿಸಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಿಂದ 80 ಸಾವಿರ ವೆಚ್ಚ ಮಾಡಿ 2 ಲಕ್ಷ ಮರಿ ತಂದು ಸೀಗಡಿ ಕೃಷಿ ಮಾಡಿದ್ದಾರೆ ಅದಕ್ಕೆ ಮೂರು ತಿಂಗಳ ಅವಧಿಯಲ್ಲಿ 4 ಟನ್ ಫೀಡ್ ನೀಡಿದ್ದಾರೆ ಸೀಗಡಿ ಕೃಷಿ ಮಾಡಲು ನಿರ್ವಹಣೆಗಾಗಿ ಒಬ್ಬರನ್ನು ನೇಮಕ ಮಾಡಿ ಮೂರು ತಿಂಗಳಿಗೆ 60 ಸಾವಿರ ರೂಗಳ ಕೂಲಿಯನ್ನು ನೀಡಿರುವ ರೈತ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಅವರಿಗೆ ನಿರೀಕ್ಷೆಗಿಂತಲೂ ಅಧಿಕ ಸೀಗಡಿ ಇಳುವರಿ ಬಂದಿದ್ದು ಮೊದಲ ಪ್ರಯೋಗದಲ್ಲಿ ಯಶಸ್ವಿಯಾದ ಬಳಿಕ ಸಂತಸಗೊಂಡಿದ್ದಾರೆ.

ಮೀನುಗಾರಿಕೆಯಲ್ಲಿ ಪಿಹೆಚ್‍ಡಿ ಮಾಡಿರುವ ಡಾ.ವಿಶ್ವನಾಥ್‍ರೆಡ್ಡಿ ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಂದ್ರ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ತಮ್ಮ ಜಮೀನಿನಲ್ಲಿ ನೀರಿನ ಹೊಂಡವನ್ನು ನಿರ್ಮಿಸಿ ಆಂಧ್ರಪ್ರದೇಶದ ನೆಲ್ಲೂಲು ಜಿಲ್ಲೆಯಿಂದ ಮರಿಗಳನ್ನು ತಂದು ಸಾಕಾಣಿಕೆ ಮಾಡಿ ಆದಾಯಗಳಿಸಿದ್ದೇನೆ ಆಂಧ್ರಪ್ರದೇಶದ ನೆಲ್ಲೂರಿನ ನೆಲ್ಲೂರು ಇಮ್ರಾನ್ ಪಾಷ ಎಂಬುವರಿಗೆ ಒಂದು ಕೆಜಿ 300 ರೂಗಳಂತೆ ನಾಲ್ಕೂವರೆ ಟನ್ ಸೀಗಡಿ ಮಾರಾಟ ಮಾಡಿದ್ದೇನೆ ಒಂದು ಕೆಜಿ 50 ಬಂದರೇ 350 ರೂಗಳ ದರಕ್ಕೆ ಮಾರಾಟವಾಗುವ ಸೀಗಡಿಯನ್ನು ಬೆಳೆಸಲು ಬಯಲುಸೀಮೆ ಜಿಲ್ಲೆಯ ಭಾಗಗಳ ರೈತರು ಪ್ರಯೋಗ ಮಾಡಿ ಆರ್ಥಿಕವಾಗಿ ಅಭಿವೃಧ್ಧಿ ಹೊಂದಬೇಕೆಂದು ಪ್ರಗತಿಪರ ರೈತ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಮನವಿ ಮಾಡಿ ಮುಂದಿನ ದಿನಗಳಲ್ಲಿ 10 ಎಕರೆ ಪ್ರದೇಶದಲ್ಲಿ ಸೀಗಡಿ ಕೃಷಿಯನ್ನು ವಿಸ್ತರಿಸಲು ಯೋಜನೆ ರೂಪಿಸಿ ಅದಕ್ಕಾಗಿ 100 ಸೋಲಾರ್ ದೀಪಗಳನ್ನು ಅಳವಡಿಸಿ ಪೂಲಕುಂಟಹಳ್ಳಿಯಲ್ಲಿ ಸೋಲಾರ್ ಘಟಕವನ್ನು ಆರಂಭಿಸಲು ಚಿಂತನೆ ಮಾಡಿದ್ದೇನೆ ಎಂದು ತಮ್ಮ ಅನುಭವನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

Advertisement

ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಬಳ್ಳಾರಿ,ರಾಯಚೂರು ಜಿಲ್ಲೆಗಳಲ್ಲಿ ಹಾಗೂ ನೆರೆ ಆಂಧ್ರ,ತಮಿಳುನಾಡು,ಮಹಾರಾಷ್ಟ್ರ, ಪ್ರದೇಶದಲ್ಲಿ ಸೀಗಡಿ ಸಾಕಾಣಿಕೆ ಮಾಡುತ್ತಾರೆ ಉಪ್ಪುನೀರಿನಲ್ಲಿ ಸಾಕಾಣಿಕೆ ಮಾಡುತ್ತಾರೆ ಆದರೇ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಯೋಗ ಮಾಡಿ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಯಶಸ್ವಿಯಾಗಿದ್ದಾರೆ ಜಿಲ್ಲೆಯ ರೈತರು ಸೀಗಡಿ ಕೃಷಿ ಮಾಡಿ ಲಾಭಗಳಿಸಬಹುದಾಗಿದೆ ಒಂದು ಕೆಜಿ 300 ರೂಗಳಿಗೆ ಮಾರಾಟವಾಗುತ್ತದೆ ಇದರಲ್ಲಿ ಪ್ರೋಟೀನ್ 35% ರಷ್ಟಿದೆ ಮಕ್ಕಳಿಗೆ,ಬಾಣಂತಿಯರಿಗೆ ಬಹಳ ಪೌಷ್ಠಿಕ ಆಹಾರ ಇದನ್ನು ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ಫ್ರೈ ಮಾಡಿ ಮಾರಾಟ ಮಾಡುತ್ತಾರೆ.
ನಾಗೇಂದ್ರ ಮೀನುಗಾರಿಕೆ ಇಲಾಖೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next