Advertisement

ಪೇಜಾವರ ಶ್ರೀ ನಿಂದನೆ: ದೂರು 

12:29 PM Aug 04, 2018 | Team Udayavani |

ಉಡುಪಿ: ಟ್ಯಾಬ್ಲಾಯ್ಡ ವಾರಪತ್ರಿಕೆಯೊಂದು ಪೇಜಾವರ ಶ್ರೀಗಳ ವಿರುದ್ಧ ಕಪೋಲಕಲ್ಪಿತ, ಆಧಾರ ರಹಿತ ಸುದ್ದಿಗಳನ್ನು ಪ್ರಕಟ ಮಾಡಿ ಶ್ರೀಗಳನ್ನು ನಿಂದಿಸಿದೆ. ಇದು ಅಭಿಮಾನಿಗಳನ್ನು ಕೆರಳಿಸಿದ್ದು, ಇದರಿಂದ ಶಾಂತಿ ಸೌಹಾರ್ದಕ್ಕೆ ಭಂಗ ಉಂಟಾಗಲಿದೆ.

Advertisement

ಹಾಗಾಗಿ ವಾರಪತ್ರಿಕಾ ಸಂಪಾದಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಶ್ರೀಗಳ ಅಭಿಮಾನಿ ಬಳಗದ ಪರವಾಗಿ ಶುಕ್ರವಾರ ಉಡುಪಿ ನಗರ ಠಾಣೆಯ ಪೊಲೀಸರಿಗೆ ದೂರು ಸಲ್ಲಿಸಲಾಯಿತು.

ಅನ್ಸಾರ್‌ ಅಹಮ್ಮದ್‌, ಆರೀಫ್, ಸುಧೀರ್‌ ಪೂಜಾರಿ, ಶೇಖ್‌ ಇರ್ಷಾದ್‌, ಪ್ರಸಾದ್‌ ಶೆಟ್ಟಿ, ಶಾಹಿದ್‌ ರೆಹಮತುಲ್ಲಾ, ಹರ್ಷದ್‌, ಗುರುರಾಜ್‌ ಅಮೀನ್‌, ಮುನ್ನಾ, ಗ್ಲಿಸ್ಟನ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next