Advertisement

Ladyhill ಅಪಘಾತ ಪ್ರಕರಣ: ಉನ್ನತ ತನಿಖೆ, ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

08:31 PM Nov 19, 2023 | Team Udayavani |

ಮಂಗಳೂರು: ಕಳೆದ ತಿಂಗಳು ನಗರದ ಲೇಡಿಹಿಲ್ ಬಳಿ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಢಿಕ್ಕಿಯಾಗಿ ಓರ್ವಳು ಯುವತಿ ಮೃತಪಟ್ಟು ನಾಲ್ವರು ಗಾಯಗೊಂಡ ಪ್ರಕರಣದ ಉನ್ನತ ಮಟ್ಟದ ತನಿಖೆಯಾಗಬೇಕು, ಮೃತ ಯುವತಿಯ ಕುಟುಂಬಿಕರಿಗೆ ಸರಕಾರ ಗರಿಷ್ಠ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರವಿವಾರ ಸಂಜೆ ಬೋಂದೆಲ್ ನಲ್ಲಿ‌ ಸರ್ವಜ್ಞ ವೃತ್ತದ ಬಳಿ ಪ್ರತಿಭಟನೆ ನಡೆಯಿತು.

Advertisement

ಮೃತಪಟ್ಟ ರೂಪಶ್ರೀ ಅವರ ಭಾವಚಿತ್ರಕ್ಕೆ ಆಕೆಯ ತಾಯಿ ದೀಪ ಬೆಳಗಿ ಪ್ರತಿಭಟನೆಗೆ ಚಾಲನೆ ನೀಡಿದರು.ಘಟನೆಯ ಬಗ್ಗೆ ಸರಿಯಾದ ತನಿಖೆಯಾಗಿಲ್ಲ.‌ಜಿಲ್ಲಾಡಳಿತ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ರೂಪಶ್ರೀ‌ ಸಾವಿಗೆ‌ ನ್ಯಾಯ ಒದಗಿಸಿಕೊಡಬೇಕು. ಪಾದಚಾರಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ನೂರಾರು ಪ್ರತಿಭಟನಾಕಾರರು ದೀಪದೊಂದಿಗೆ ಮೌನ ಮೆರವಣಿಗೆ‌‌ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next