Advertisement

Drowned: ಪಯಸ್ವಿನಿ, ಕಾವೇರಿಯಲ್ಲಿ ಮುಳುಗಿ ನಾಲ್ವರ ಸಾವು :ಪುಟಾಣಿಗಳಿಬ್ಬರು ನೀರುಪಾಲು

10:57 PM Apr 11, 2023 | Team Udayavani |

ಕಾಸರಗೋಡು: ಮುಳ್ಳೇರಿಯ ಸಮೀಪದ ಅಡೂರಿನ ದೇವರಡ್ಕದಲ್ಲಿ ಇಬ್ಬರು ಪುಟ್ಟ ಮಕ್ಕಳು ಪಯಸ್ವಿನಿ ನದಿಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

Advertisement

ದೇವರಡ್ಕದ ಶಾಫಿ-ರುಬೀನ ದಂಪತಿಯ ಪುತ್ರ ಮಹಮ್ಮದ್‌ ಆಶಿಖ್‌ (4) ಮತ್ತು ಹಸೈನಾರ್‌- ಸೌದಿ ದಂಪತಿಯ ಪುತ್ರ ಮಹಮ್ಮದ್‌ ಫಾಸಿಲ್‌ (3) ಮೃತಪಟ್ಟವರು.

ಈ ದುರ್ಘ‌ಟನೆಯಿಂದಾಗಿ ಇಡೀ ಗ್ರಾಮಕ್ಕೆ ಗರಬಡಿದಂತಾಗಿದೆ. ಸಾವನ್ನಪ್ಪಿರುವ ಪುಟಾಣಿಗಳು ವಿದೇಶದಲ್ಲಿ ಉದ್ಯೋಗಿಯಾಗಿರುವ ಶಾಫಿ ಹಾಗೂ ಅವರ ಸಹೋದರಿ ಸೌದಾ ಅವರ ಮಕ್ಕಳಾಗಿದ್ದಾರೆ. ಅವರ ಮನೆ ದೇವರಡ್ಕದಲ್ಲಿದ್ದು, ಬೆಳಗ್ಗೆ ಮನೆ ಆಸುಪಾಸಿನಲ್ಲಿ ಆಟ ಆಡಿಕೊಂಡಿದ್ದ ಮಕ್ಕಳು ಮಧ್ಯಾಹ್ನ ಊಟದ ವೇಳೆಗೆ ನೋಡುವಾಗ ಎಲ್ಲೂ ಕಾಣಿಸಲಿಲ್ಲ.

ಪಕ್ಕದ ಹೊಳೆಯ ಕಡೆ ತೆರಳಿರಬಹುದೆಂದು ಸಂಶಯಿಸಿ ಹುಡುಕಾಡಿದಾಗ ಇಬ್ಬರು ಕೂಡ ನದಿಯ ನೀರಿನಲ್ಲಿ ಮುಳುಗೇಳುತ್ತಿರುವುದು ಕಾಣಿಸಿತು. ತತ್‌ಕ್ಷಣ ಸ್ಥಳೀಯ ನಿವಾಸಿ ಜಲೀಲ್‌ ಅವರ ಆಟೋರಿಕ್ಷಾದಲ್ಲಿ ಮುಳ್ಳೇರಿಯದ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತಪಟ್ಟ ಇಬ್ಬರು ಮಕ್ಕಳ ತಂದೆಯಂದಿರೂ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ.

ಮೃತ ಆಶಿಖ್‌ ಹೆತ್ತವರು ಹಾಗೂ ಸಹೋದರಿಯನ್ನು, ಫಾಸಿಲ್‌ ಹೆತ್ತವರು ಮತ್ತು ಇಬ್ಬರು ಸಹೋದರಿಯರು ಮತ್ತು ಸಹೋದರನನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next