Advertisement

ಜಿಲ್ಲೆಯ ಸಮಸ್ಯೆ ಬಗೆಹರಿಸಲೂ ಗಮನ ನೀಡುವೆ

05:05 PM Jun 14, 2018 | Team Udayavani |

‌ಕಡೂರು: ವಿಧಾನ ಪರಿಷತ್ತಿನಲ್ಲಿ ಪದವೀಧರರ ಸಮಸ್ಯೆಗಳ ಜೊತೆಗೂಡಿ ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಅವುಗಳ ಸೂಕ್ತ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ವಿಧಾನ ಪರಿಷತ್‌ ನೂತನ ಸದಸ್ಯ ಆಯನೂರು ಮಂಜುನಾಥ್‌ ತಿಳಿಸಿದರು. ಅವರು ಬುಧವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶಾಸಕ ಬೆಳ್ಳಿಪ್ರಕಾಶ್‌   ಮತ್ತು ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

Advertisement

ವಿಧಾನ ಪರಿಷತ್‌ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತ ನೀಡಿ ತಮ್ಮನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಮೊದಲ ಸುತ್ತಿನಿಂದ ಕಡೆಯ ಸುತ್ತಿನ ತನಕವೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು ಪದವೀಧರರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು.

ನಮ್ಮ ಪಕ್ಷದ ಎಲ್ಲ ಶಾಸಕರೂ ಶ್ರಮವಹಿಸಿದ್ದಾರೆ. ಕಡೂರಿನಲ್ಲಿ ಮತದಾನದ ವೇಳೆ ಸುರಿದ ಮಳೆಯಲ್ಲಿಯೂ ಶಾಸಕ ಬೆಳ್ಳಿಪ್ರಕಾಶ್‌ ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಈ ಭಾಗದ ಮತಗಳು ಹೆಚ್ಚು ಬಿಜೆಪಿಗೆ ದೊರೆಯಲು ಕಾರಣವಾಯಿತು ಎಂದು ಶ್ಲಾಘಿಸಿದರು. ನನ್ನನ್ನು ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತನಾಗಿದ್ದೇನೆ. ವಿಧಾನ ಸಭೆಯಲ್ಲಿ ಶಾಸಕ ಬೆಳ್ಳಿಪ್ರಕಾಶ್‌ ಪ್ರಸ್ತಾಪಿಸಿದ ವಿಚಾರವನ್ನು ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸುವಂತೆ ಮಾಡುತ್ತೇನೆ.
ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಹಲವು ಭರವಸೆ ನೀಡಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ
ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಮ್ಮ ಒಡನಾಡಿ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಸೋಲು ನೋವು ತಂದಿದೆ.
ಅಲ್ಲಿ ಗೆದ್ದದ್ದು ಹಣ. ಸಿದ್ದಾಂತದ ಸೋಲು ಅದು ಎಂದು ವಿಷಾದಿಸಿದರು.

ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ, ಆಯನೂರುಮಂಜುನಾಥ್‌ ಅವರು ವಿಧಾನ ಪರಿಷತ್‌ಗೆ  ಆಯ್ಕೆಗೊಂಡಿರುವುದು ನಮ್ಮ ಉತ್ಸಾಹ ಮತ್ತು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಶೀಘ್ರದಲ್ಲಿಯೇ ಈ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ ಏರ್ಪಡಿಸಿ ಆಯನೂರು ಮಂಜುನಾಥ್‌ ಅವರಿಗೆ ಅಭಿನಂದನಾ ಸಮಾರಂಭ ನಡೆಸುತ್ತೇವೆ ಎಂದರು.ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ, ಮಂಜುನಾಥ್‌,ಶಿವಮೊಗ್ಗದ ಬಿಜೆಪಿ ಮುಖಂ ದತ್ತಾತ್ರಿ, ಅರೇಕಲ್‌  ಪ್ರಕಾಶ್‌, ಎಚ್‌.ವಿ.ಗಿರೀಶ್‌, ಬಿ.ಎಲ್‌. ಶ್ರೀನಿವಾಸ್‌, ಸುನೀತಾ ಜಗದೀಶ್‌, ಎ.ಮಣಿ , ಹುಲ್ಲೇಹಳ್ಳಿ ಲಕ್ಷ್ಮಣ, ಆನಂದಮೂರ್ತಿ, ಸಂತೋಷ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next