Advertisement

Pavagada: ವಿದ್ಯುತ್ ಅವಘಡ: ಯುವಕರಿಬ್ಬರು ಸಾವು

03:56 PM Aug 17, 2024 | Team Udayavani |

ಪಾವಗಡ: ತಾಲೂಕಿನ ಟಿ.ಎನ್. ಬೆಟ್ಟ ಬಳಿಯ ಜಮೀನಿನಲ್ಲಿ ಶೇಂಗಾ ಬೆಳೆ ಕಾವಲಿಗೆ ಹೋಗಿದ್ದ ಯವಕರಿಬ್ಬರು ವಿದ್ಯುತ್ ತಗುಲಿ ಆ.16ರ ಶುಕ್ರವಾರ ರಾತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ಗ್ರಾಮದ ಅನಿಲ್(29), ಪುಟ್ಟರಾಜು(34) ಮೃತಪಟ್ಟವರು.

ಶುಕ್ರವಾರ ರಾತ್ರಿ ಶೇಂಗಾ ಬೆಳೆ ಕಾವಲಿಗಾಗಿ ಅನಿಲ್ ಮತ್ತು ಪುಟ್ಟರಾಜು ಜಮೀನಿನ ಬಳಿ ಹೋಗಿದ್ದು, ಕಾಡು ಹಂದಿ-ಕರಡಿಗಳು ಬಾರದಂತೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಪುಟ್ಟರಾಜು ಮೃತಪಟ್ಟಿದ್ದಾರೆ. ಪುಟ್ಟರಾಜು ಅವರನ್ನು ಕಾಪಾಡಲು ಟ್ರಾನ್ಸ್ ಫಾರ್ಮರ್ ಕಡೆ ಓಡಿ ಹೋಗುತ್ತಿದ್ದ ಅನಿಲ್ ಅವರಿಗೂ ತಂತಿ ತಗುಲಿ ವಿದ್ಯುತ್ ಪ್ರವಹಿಸಿ ಅವರೂ ಮೃತಪಟ್ಟರು.

ಆ.17ರ ಶನಿವಾರ ಬೆಳಿಗ್ಗೆ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲು ಹೋಗಿದ್ದ ಕೂಲಿ ಕಾರ್ಮಿಕರು ಇದನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಬೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅರಸೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಮಾಜಿ ಸಚಿವ ವೆಂಕಟರಮಣಪ್ಪ ಆಸ್ಪತ್ರೆಗೆ ಭೇಟೆ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next