Advertisement

ಮಡಾಮಕ್ಕಿ: ವೃದ್ದ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಸಾವು

08:46 PM Sep 10, 2024 | Team Udayavani |

ಸಿದ್ದಾಪುರ: ಮಡಾಮಕ್ಕಿ ಗ್ರಾಮದ ಶಿವರಾಮ(74) ಅವರು ಮಂಡಿನೋವು ಮತ್ತು ಕಣ್ಣಿನ ದೃಷ್ಠಿದೋಷದಿಂದ ಬಳಲುತ್ತಿದ್ದರು.

Advertisement

ಕಣ್ಣಿನ ದೃಷ್ಠಿ ಸಮಸ್ಯೆಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ್ದರೂ, ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಣ್ಣು ಸರಿಯಾಗಿ ಕಾಣಿದೇ ಜು.25ರ ರಾತ್ರಿ ಮಂಡಿನೋವಿಗೆ ತೆಗೆದುಕೊಳ್ಳುವ ಸಿರಪ್‌ ಔಷಧ ಬದಲಾಗಿ ಅಡಿಕೆ ಗಿಡಕ್ಕೆ ಹಾಕುವ ಔಷಧ ಸೇವಿಸಿ, ಅಸ್ವಸ್ಥಗೊಂಡರು. ಕೂಡಲೇ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ಆ.24ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಿಸದೆ ಸೆ. 8ರಂದು ಮೃತಪಟ್ಟರು.

ಪುತ್ರ ಅಮರ್‌(37) ಅವರು ಪೊಲೀಸರಿಗೆ ದೂರು ನೀಡಿದರು. ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next