Advertisement

KSRTC: ಧರ್ಮಸ್ಥಳಕ್ಕೆ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ; ರಾ. ಹೆದ್ದಾರಿ ತಡೆದು ಪ್ರತಿಭಟನೆ

09:45 AM Dec 10, 2023 | Team Udayavani |

ಚಿಕ್ಕಮಗಳೂರು : ಧರ್ಮಸ್ಥಳ, ಮಂಗಳೂರು, ಉಡುಪಿ ಪ್ರಯಾಣಿಕರ ನಿತ್ಯವೂ ಬಸ್‌ ಸಮಸ್ಯೆಯ ಗೋಳಾಟ ಮುಂದುವರಿದಿದ್ದು, ಬಸ್ಸಿಗಾಗಿ ಪ್ರಯಾಣಿಕರು ಮಧ್ಯರಾತ್ರಿ ಹೋರಾಟ ನಡೆಸಿದ ಘಟನೆ ಚಿಕ್ಕಮಗಳೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.

Advertisement

ಧರ್ಮಸ್ಥಳಕ್ಕೆ ಬಸ್ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದು, ಚಳಿಯಲ್ಲೇ ನೂರಾರು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಮಲಗಿದ್ದರು.

ಸಿಟ್ಟಿಗೆದ್ದ ಕೆಲ ಪ್ರಯಾಣಿಕರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆದಿದ್ದು, ತಡರಾತ್ರಿ 2ಗಂಟೆವರೆಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ಪ್ರಯಾಣಿಕರಿದ್ದರೂ ಬಸ್ ಬಿಡದ ಅಧಿಕಾರಿಗಳು ನಡೆ ವಿರೋಧಿಸಿ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಮಧ್ಯರಾತ್ರಿ ಹೋರಾಟ ನಡೆಸಿದರು. ಈ ಸಂದರ್ಭ ಪೊಲೀಸರು ಹಾಗೂ ಪ್ರಯಾಣಿಕರ ನಡುವೆಯೂ ವಾಗ್ವಾದ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next