Advertisement

Paris Olympics: ಹಾಕಿ ವೀರರಿಗೆ ಸಿಎಂ ಭಗವಂತ್‌ ಮಾನ್‌ ಸಮ್ಮಾನ

12:11 AM Aug 19, 2024 | Team Udayavani |

ಚಂಡೀಗಢ: ಪ್ಯಾರಿಸ್‌ ಒಲಿಂಪಿಕ್ಸ್‌ನ ಹಾಕಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ತಂಡ ಪಂಜಾಬ್‌ ರಾಜ್ಯದ ಆಟಗಾರರಿಗೆ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ತಲಾ ಒಂದು ಕೋಟಿ ರೂ. ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

Advertisement

ಈ ಸಂದರ್ಭ ಮಾತನಾಡಿದ ಅವರು ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದ ಈ ಮಣ್ಣಿನ ಪುತ್ರರನ್ನು ಸಮ್ಮಾನಿಸುತ್ತಿರುವುದು ಐತಿಹಾಸಿಕ ಸಂದರ್ಭವಾಗಿದೆ ಎಂದರು. ರಾಜ್ಯದ ಎಂಟು ಹಾಕಿ ಆಟಗಾರರಿಗೆ ತಲಾ 1 ಕೋಟಿ ರೂ. ಮತ್ತು ರಾಜ್ಯದಿಂದ ಒಲಿಂಪಿಕ್‌ ಗೇಮ್ಸ್‌ನಲ್ಲಿ ಭಾಗವಹಿಸಿದ 11 ಮಂದಿಗೆ ತಲಾ 15 ಲಕ್ಷ ರೂ.ಗಳ ಚೆಕ್‌ ಅನ್ನು ಅವರು ವಿತರಿಸಿದರು.

ಭಾರತ ತಂಡದ ಪ್ರತಿಯೊಂದು ಹಾಕಿ ಪಂದ್ಯವನ್ನು ತಾನು ವೀಕ್ಷಿಸಿದ್ದೇನೆ ಮತ್ತು ಈ ಆಟಗಾರರ ಅದ್ಭುತ ಪ್ರದರ್ಶನ ಎಲ್ಲರಿಗೂ ಹೆಮ್ಮೆ ತಂದಿದೆ ಎಂದು ಮಾನ್‌ ಹೇಳಿದರು. ಪದಕ ಗೆಲ್ಲುವುದು ಪ್ರತಿಯೊಬ್ಬ ಸ್ಪರ್ಧಿಯ ಕನಸು ಆಗಿದೆ. ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದ ರೀತಿ ಅದ್ಭುತವಾಗಿದೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next