Advertisement

ಪರಮೇಶ್ವರ್‌ ಅವರು ಸಿಎಂ ಆದ್ರೆ ಖುಷಿ ಪಡುವವರಲ್ಲಿ ನಾನೂ ಒಬ್ಬ:ಉಗ್ರಪ್ಪ

11:04 AM Nov 18, 2018 | Team Udayavani |

ಬಳ್ಳಾರಿ: ಡಾ.ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿ ಆದರೆ ಸಂಭ್ರಮಿಸುವವರಲ್ಲಿ ನಾನೂ ಒಬ್ಬ ಎಂದು ಬಳ್ಳಾರಿಯ ನೂತನ  ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಮೇಶ್ವರ್‌ ಅವರು ಅರ್ಹತೆ ಉಳ್ಳವರು. ಪಕ್ಷದ ಅಧ್ಯಕ್ಷ ರಾಗಿ ಕೆಲಸ ಮಾಡಿದವರು. ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಹಿರಿಯರಿದ್ದಾರೆ.   ಸಂದರ್ಭ ಬಂದಾಗ ಪಕ್ಷ ತೀರ್ಮಾನ ಮಾಡುತ್ತದೆ ಎಂದರು. 

ಇದೇ ವೇಳೆ ನಮ್ಮ ಪಕ್ಷದಲ್ಲಿ  ಮುಖ್ಯಮಂತ್ರಿ ಆಗುವ ಅರ್ಹತೆ ಉಳ್ಳವರು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಮಂದಿ ಇದ್ದಾರೆ ಎಂದರು.  

ತುಮಕೂರು ಜಿಲ್ಲೆಗೆ ಇದುವರೆಗೆ ಮುಖ್ಯಮಂತ್ರಿ ಸ್ಥಾನ ಲಭ್ಯ ಆಗಿಲ್ಲ .ಪರಮೇಶ್ವರ್‌ ಅವರು ಸಿಎಂ ಆದರೆ ತುಮಕೂರು ಜಿಲ್ಲೆಗೆ ಪ್ರಾತಿನಿಧ್ಯ ದೊರಕಿದಂತಾಗುತ್ತದೆ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next