Advertisement

ಪರ್ಕಳ : ವೈಭವದ ಗಣೇಶನ ವಿಸರ್ಜನಾ ಮೆರವಣಿಗೆ

07:05 AM Sep 04, 2017 | Harsha Rao |

ಉಡುಪಿ: ಪರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಸುವರ್ಣ ಮಹೋತ್ಸವದ ಸುವರ್ಣ ಸಂಗಮದ ಅಂಗವಾಗಿ ವೈಭವವಾದ ಗಣೇಶನ ವಿಸರ್ಜನಾ ಮೆರವಣಿಗೆಯು ವಿಘ್ನೇಶ್ವರ ಸಭಾಭವನದಿಂದ ಹೊರಟು ಪರ್ಕಳ ಪೇಟೆಯಾಗಿ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು.

Advertisement

ಮೆರವಣಿಗೆಯಲ್ಲಿ ವಿವಿಧ ಸ್ತಬ್ಧ ಚಿತ್ರಗಳು, ತಾಲೀಮ್‌, ವಾದ್ಯಗೋಷ್ಠಿ, ಕೀಲು ಕುದುರೆ, ಆನೆ, ಕೋಣ, ಕೋಳಿಗಳ ಸಾಲು,ಬ್ಯಾಂಡು, ಕೇರಳದ ಚೆಂಡೆಬಳಗ,ವಿವಿಧ ವೇಷಗಳು, ಯಕ್ಷಗಾನ, ಪರ್ಕಳದ ನಾಲ್ಕು ವರ್ಷದ ಬಾಲಕಿ ಪ್ರತೀಕ್ಷಾ ಸಹಿತ ಮರಕಾಲು ವೇಷ,ಭಜನೆ ತಂಡ,ಡೊಳ್ಳು ಕುಣಿತದೊಂದಿಗೆ ಮೆರವಣಿಗೆಯುದ್ದಕ್ಕೂ ಜನಸಾಗರವೇ ನೆರೆದಿತ್ತು.

ಪರ್ಕಳದ ಇತಿಹಾಸದಲ್ಲೆ ಪ್ರಥಮ ಬಾರಿಗೆ ಇಷ್ಟೊಂದು ಜನಸೋ¤ಮ ಕಂಡು ಬಂದಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ  ಮಹೇಶ ಠಾಕೂರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next