Advertisement

ಪಂಚತಂತ್ರ ಫೋಟೋಶೂಟ್‌; ಗ್ಯಾರೇಜ್‌ ಸೆಟ್‌ನಲ್ಲಿ ಸಿನಿಮಾ ಶುರು

11:56 AM Feb 06, 2018 | Team Udayavani |

ಯೋಗರಾಜ್‌ ಭಟ್‌ ಪಂಚತಂತ್ರ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಬಾರಿ ಭಟ್ಟರು ಹೊಸಬರನ್ನಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ. ಈಗ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ಈಗಾಗಲೇ ಚಿತ್ರದ ಫೋಟೋಶೂಟ್‌ ಆಗಿದ್ದು, ನಾಳೆಯಿಂದ
(ಫೆಬ್ರವರಿ 7)ಚಿತ್ರೀಕರಣ ಆರಂಭವಾಗಲಿದೆ.

Advertisement

ಚಿತ್ರದಲ್ಲಿ ವಿಹಾನ್‌ ಗೌಡ ನಾಯಕರಾಗಿ ನಟಿಸುತ್ತಿದ್ದಾರೆ. ಈ ಹಿಂದೆ “ಕಾಲ್‌ ಕೆಜಿ ಪ್ರೀತಿ’ ಎಂಬ ಚಿತ್ರದಲ್ಲಿ ನಟಿಸಿದ್ದ ವಿಹಾನ್‌ಗೆ ಈಗ ಭಟ್ಟರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ವಿಹಾನ್‌ಗೆ ನಾಯಕಿಯಾಗಿ ಸೋನಾಲ್‌ ಮಾಂಟೇರಿಯೋ ಮತ್ತು ಅಕ್ಷರಾ ಗೌಡ ಆಯ್ಕೆಯಾಗಿದ್ದಾರೆ.

ಇದೊಂದು ಯೂಥ್‌ಫ‌ುಲ್‌ ಕಥೆಯಾಗಿದ್ದು, ಹಾಸ್ಯದೊಂದಿಗೆ ನವಿರಾದ ಪ್ರೇಮಕಥೆ ಇದೆ. ಸಾಕಷ್ಟು ನೈಜತೆಗೆ ಹತ್ತಿರವಾಗಿರುವ ಅಂಶಗಳು ಚಿತ್ರದ ಮತ್ತೂಂದು ಹೈಲೈಟ್‌. ಮುಖ್ಯವಾಗಿ ಯುವಪೀಳಿಗೆಯನ್ನು ಮನಸ್ಸಲಿಟ್ಟುಕೊಂಡೇ ಭಟ್ಟರು ಕಥೆ ಹೆಣೆದಿದ್ದಾರೆ. ಈಗಿನ ವಾಸ್ತವತೆಯ ಸಾರ ಚಿತ್ರದುದ್ದಕ್ಕೂ ಕಾಣಸಿಗಲಿದೆಯಂತೆ. ಇದು ಭಟ್ಟರ 12 ನೇ ಚಿತ್ರ ಎಂಬುದು ಇನ್ನೊಂದು ವಿಶೇಷ.

ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಗ್ಯಾರೇಜ್‌ ಸೆಟ್‌ ಹಾಕಲಾಗಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಅಲ್ಲೇ ನಡೆಯಲಿದೆ. ಚಿತ್ರದಲ್ಲಿ ರಂಗಾಯಣ ರಘು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್‌ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಶಶಿಧರ್‌ ಅಡಪ ಅವರ ಕಲಾನಿರ್ದೇಶನ ಚಿತ್ರಕ್ಕಿದೆ. ಸುರೇಶ್‌ ಆರ್ಮುಗನ್‌ ಸಂಕಲನವಿದೆ. 

Advertisement

Udayavani is now on Telegram. Click here to join our channel and stay updated with the latest news.

Next