Advertisement

Panamburu ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟು ಸಾವು

11:45 PM Jan 15, 2024 | Team Udayavani |

ಪಣಂಬೂರು: ಅತೀ ವೇಗ, ದಿಢೀರ್‌ ಬ್ರೇಕ್‌ ಹಾಕಿದ ಪರಿಣಾಮ ಪ್ರಯಾಣಿಸುತ್ತಿದ್ದ ವೃದ್ಧೆಯೋರ್ವರು ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಸಾವನ್ನಪ್ಪಿದ ಘಟನೆ ಜೋಕಟ್ಟೆ ಕ್ರಾಸ್‌ ಬಳಿ ನಡೆದಿದೆ.

Advertisement

ಈರಮ್ಮ (65) ಮೃತ ಮಹಿಳೆ. ಅವರು ಸೋಮವಾರ ಬೆಳಗ್ಗೆ ಜೋಕಟ್ಟೆಯಿಂದ ಸುರತ್ಕಲ್‌ಗೆ ಪ್ರಯಾಣಿಸುತ್ತಿದ್ದರು. ಚಾಲಕನ ಬಳಿಯ ಸೀಟಿನಲ್ಲಿ ಕುಳಿತಿದ್ದು, ಹಠಾತ್‌ ಚಾಲಕ ಬ್ರೇಕ್‌ ಹಾಕಿದ್ದರಿಂದ ಅವರು ಬಸ್ಸಿನಿಂದ ಹೊರಭಾಗಕ್ಕೆ ಎಸೆಯಲ್ಪಟ್ಟು ಹಿಂದಿನ ಚಕ್ರ ಅವರ ತಲೆಯ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟರು. ಮಂಗಳೂರು ಉತ್ತರ ಸಂಚಾರ ಠಾಣೆಯ ಪೊಲೀಸರು ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next