Advertisement

ಮಂಗಳೂರು: ಸ್ವಿಫ್ಟ್ ಕಾರು ಸಹಿತ ನಾಲ್ವರು ಗೋ ಕಳ್ಳರ ಬಂಧನ

06:46 PM May 02, 2022 | Team Udayavani |

ಮಂಗಳೂರು: ಪಣಂಬೂರು ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 25 ರಂದು ವರದಿಯಾಗಿದ್ದ ದನಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕಾರು ಸಹಿತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Advertisement

ಕೆಳಗಿನ ತೊಕೂರು ಎಂಬಲ್ಲಿ ಮಹಾಬಲ ಪೂಜಾರಿ ಎಂಬುವರ ಮನೆಯ ದನದ ಕೊಟ್ಟಿಗೆಯಿಂದ 3 ದನಗಳನ್ನು ಕಳ್ಳತನ ಮಾಡಿದ್ದರು ಎಂದು ದೂರು ದಾಖಲಾಗಿತ್ತು.

ಬಂಧಿತ ಆರೋಪಿಗಳು ಮಹಮ್ಮದ್ ಇಸ್ಮಾಯಿಲ್, ಸಮೀರ್ ಜೋಕಟ್ಟೆ ದಾವೂದ್ ಹಕೀಂ ಮತ್ತು ಮಹಮ್ಮದ್ ಇಲ್ಯಾಸ್ ಜೋಕಟ್ಟೆ ಎನ್ನುವವರಾಗಿದ್ದರೆ.

ಪಣಂಬೂರು ಪೊಲೀಸರ ತಂಡ ಪತ್ತೆ ಮಾಡಿ ಆರೋಪಿಗಳಿಂದ ದನಗಳನ್ನು ಸಾಗಾಟ ಮಾಡಲು ಬಳಿಸಿದ ರೂ 3 ಲಕ್ಷ ರೂ ಮೌಲ್ಯದ ಸ್ವಿಫ್ಟ್ ಕಾರನ್ನು ಮತ್ತು ದನಗಳನ್ನು ವಧೆ ಮಾಡಿ ಮಾಂಸ ಮಾಡಲು ಬಳಿಸಿದ ಆಯುಧಗಳನ್ನು ವಶ ಪಡಿಸಿಕೊಂಡಿರುತ್ತಾರೆ .

ಆರೋಪಿಗಳೆಲ್ಲರೂ ಸೇರಿ ದನಗಳನ್ನು ಕಳ್ಳತನ ಮಾಡಿ , ಸಾಗಾಟ ಮಾಡಿರುವುಲ್ಲದೆ ವಧೆ ಮಾಡಿ ಮಾಂಸ  ಮಾಡಿರುತ್ತಾರೆ ಎಂದು ಪ್ರಕರಣದ ತನಿಖೆಯಿಂದ ತಿಳಿದುಬಂದಿದೆ . ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next