Advertisement

2ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಗೆ ಆಧಾರ್ ಬೇಕಿಲ್ಲ;ವಿತ್ತ ಇಲಾಖೆ ಸ್ಪಷ್ಟನೆಯಲ್ಲೇನಿದೆ?

05:12 PM Jan 09, 2021 | Team Udayavani |

ನವದೆಹಲಿ: 2ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ಚಿನ್ನ, ಬೆಳ್ಳಿ, ಬೆಲೆಬಾಳುವ ಹರಳುಗಳ ಆಭರಣ ಖರೀದಿಸಲು (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪ್ಯಾನ್, ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ವಿತ್ತ ಸಚಿವಾಲಯದ ಕಂದಾಯ ಇಲಾಖೆ ಶನಿವಾರ(ಜನವರಿ 09, 2021) ಸ್ಪಷ್ಟನೆ ನೀಡಿದೆ.

Advertisement

ಮೂಲಗಳ ಪ್ರಕಾರ, 2002ರ ಪಿಎಂಎಲ್ ಕಾಯ್ದೆಯಡಿ 2020ರ ಡಿಸೆಂಬರ್ 28ರಂದು ಹೊರಡಿಸಿದ್ದ ಅಧಿಸೂಚನೆಯಂತೆ ಹತ್ತು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ನಗದು ರೂಪದಲ್ಲಿ ಬೆಲೆಬಾಳುವ ವಜ್ರಾಭರಣ, ಚಿನ್ನ, ಬೆಳ್ಳಿ ಖರೀದಿಸುವ ಡೀಲರ್ಸ್ ಅಥವಾ ಗ್ರಾಹಕರು ಮಾತ್ರ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿರುವುದಾಗಿ ಹೇಳಿದೆ.

ಗ್ರಾಹಕರು ನಗದು ಮೂಲಕ ಖರೀದಿಸುವ ಚಿನ್ನ, ಬೆಳ್ಳಿ ಸೇರಿದಂತೆ ಬೆಲೆಬಾಳುವ ವಜ್ರ, ಹವಳಗಳಿಗೆ ಸಂಬಂಧಿಸಿದಂತೆ ಕೆವೈಸಿ ಸಲ್ಲಿಕೆ ಕಡ್ಡಾಯವಲ್ಲ ಎಂದು ಕೇಂದ್ರ ವಿತ್ತ ಇಲಾಖೆ ತಿಳಿಸಿದೆ. ಮಾಧ್ಯಮಗಳಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಖರೀದಿಗೂ ಕೆವೈಸಿ ಕಡ್ಡಾಯ ಎಂಬ ಸುದ್ದಿ ಹರಿದಾಡುವ ಮೂಲಕ ತಪ್ಪು ಮಾಹಿತಿ ರವಾನೆಯಾಗಿರುವುದಾಗಿ ಕೇಂದ್ರ ತಿಳಿಸಿದೆ.

ಜಾಗತಿಕ ಹಣಕಾಸು ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವ ಕಾನೂನು ಬಾಹಿರ ಚಟುವಟಿಕೆ ಮೇಲೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ಫೈನಾಶ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ ಎಟಿಎಫ್) ಕೆವೈಸಿ ಅಗತ್ಯ ಎಂದು ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next