Advertisement

ಪಾಲ್ದನೆ ಚರ್ಚ್‌ : ಹಿರಿಯ ನಾಗರಿಕರಿಗೆ ಮಾಹಿತಿ ಕಾರ್ಯಕ್ರಮ

02:45 AM Jul 10, 2017 | Team Udayavani |

ಕುಲಶೇಖರ: ಪಾಲ್ದನೆ ಸಂತ  ತೆರೇಸಾ ಚರ್ಚ್‌ನ ಹಿರಿಯ ನಾಗರಿಕರು ಮತ್ತು ವಿಧವೆಯರಿಗೆ ಸರಕಾರದಿಂದ ಸಿಗುವ ಪಿಂಚಣಿ ಮತ್ತು ಇತರ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ರವಿವಾರ ಜರಗಿತು.

Advertisement

ಮಂಗಳೂರು ಧರ್ಮಪ್ರಾಂತದ ಜುಡಿಷಿಯಲ್‌ ವಿಕಾರ್‌ ಫಾ| ವಾಲ್ಟರ್‌ ಡಿ ಮೆಲ್ಲೋ ಅವರು ಪ್ರಾರ್ಥನೆ ಹಾಗೂ ಪ್ರಥಮ ಅರ್ಜಿಯನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.

ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್‌ ಲಸ್ರಾದೋ, ಕಾರ್ಯದರ್ಶಿ ವೀಣಾ ಲೋಬೋ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಸೆಲಿನ್‌ ಡಿ’ಸೋಜಾ, ಪ್ಯಾಟ್ಸೆ ಮೊಂತೆರೋ, ಲಿಝಿ ಫೆರ್ನಾಂಡಿಸ್‌, ಆನಂದ್‌, ಸುನೀತಾ ಫೆರ್ನಾಂಡಿಸ್‌ ಮೊದಲಾದವರು ಉಪಸ್ಥಿತರಿದ್ದರು.

ಚರ್ಚ್‌ನ ಹಿರಿಯ ನಾಗರಿಕರು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next