Advertisement

Pakshikere: ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

11:07 PM Aug 22, 2023 | Team Udayavani |

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಕೊಯಿಕುಡೆ ಮದರ್‌ ತೆರೇಸಾ ಲೇಔಟ್‌ ನಲ್ಲಿ ವಾಸ್ತವ್ಯವಿರುವ ಶ್ರೀಲತಾ ಪೂಜಾರಿ ಎಂಬವರ ಮನೆಯಿಂದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ -ನಗದನ್ನು ಕಳ್ಳತನ ಮಾಡಿದ್ದಾರೆ.

Advertisement

ಶ್ರೀಲತಾ ಅವರ ಮನೆಯಲ್ಲಿ ಮೂರು ಮಂದಿ ದೊಡ್ಡವರು ಸಹಿತ ಇಬ್ಬರು ಮಕ್ಕಳು ವಾಸ್ತವ್ಯವಿದ್ದು ಶನಿವಾರ ನಾಗರಪಂಚಮಿ ಪ್ರಯುಕ್ತ ಬಿಸಿ ರೋಡ್‌ನ‌ ತಮ್ಮ ತವರು ಮನೆಗೆ ಹೋಗಿದ್ದರು.

ಮನೆಯವರು ಮಂಗಳವಾರ ಬಂದು ನೋಡಿದಾಗ ಕಳ್ಳತನ ನಡೆದದ್ದು ಬೆಳಕಿಗೆ ಬಂದಿದೆ.

ಕಳ್ಳರು ಮನೆಯ ಹಿಂಬದಿಯ ಅಡಿಗೆ ಕೋಣೆಯ ಕಬ್ಬಿಣದ ಗ್ರಿಲ್ಸ್‌ ಅನ್ನು ತುಂಡರಿಸಿ ಒಳಗಡೆ ಬಂದು ಹಿಂಬಾಗಿಲನ್ನು ಒಡೆದು ಎರಡು ಕೋಣೆಗಳನ್ನು ಜಾಲಾಡಿ ಒಂದು ಕಪಾಟಿನ ಬೀಗ ಒಡೆದು ಸುಮಾರು ಐದು ಲಕ್ಷ ರೂ. ಮೊತ್ತದ ನಗ ನಗದನ್ನು ಕಳವು ಮಾಡಿ ತೆರಳಿದ್ದಾರೆ.

ಮನೆಯಲ್ಲಿದ್ದವರು ಶನಿವಾರ ನಾಗರಪಂಚಮಿಗೆ ಹೋಗಿದ್ದರೂ ರವಿವಾರ ಮಧ್ಯಾಹ್ನ ಶ್ರೀಲತಾ ಅವರ ಮಾವ ಜಯಶೀಲ ಪೂಜಾರಿ ಮನೆಗೆ ಬಂದು ನೋಡಿ ಪಂಜ ಮೊಗೆಪಾಡಿಯಲ್ಲಿರುವ ತಮ್ಮ ಹಳೆ ಮನೆಗೆ ಹೋಗಿದ್ದರು. ಮಂಗಳವಾರ ಶ್ರೀಲತಾ ಅವರು ಮನೆಗೆ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಸ್ಥಳಕ್ಕೆ ಕೆಮ್ರಾಲ್‌ ಗ್ರಾ.ಪಂ. ಅಧ್ಯಕ್ಷ ಮಯ್ಯದ್ದಿ, ಸದಸ್ಯ ಸುರೇಶ್‌ ಪಂಜ ಮೂಲ್ಕಿ ಪೊಲೀಸರು, ಶ್ವಾನ ದಳ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸ್‌ ಶ್ವಾನ ಮನೆ ಹಿಂಬಾಗಿಲಿನಿಂದ ಒಳಗೆ ಬಂದು ಬಳಿಕ ಮನೆ ಹಿಂಭಾಗದ ಗುಡ್ಡೆ ಬದಿಗೆ ಹೋಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶ್ರೀಲತಾ ಅವರ ಪತಿ ಭರತ್‌ ರಾಜ್‌ ಪೂಜಾರಿ ಕಳೆದ ಕೆಲವು ದಿನಗಳ ಹಿಂದೆ ಹೊಸ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಕಳ್ಳತನದಿಂದಾಗಿ ಮನೆಯವರು ಕಂಗಾಲಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next